Uttara Kannada: ಹನಿಮೂನ್ ರದ್ದು ಮಾಡಿ ದೇಶ ಸೇವೆಗೆ ಹೋದ ಯೋಧ!!

Share the Article

Uttara Kannada: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ಏರ್ಪಟ್ಟ ಕಾರಣ ಹೊಸದಾಗಿ ಮದುವೆಯಾದ ಯೋಧನೊಬ್ಬ ತನ್ನ ಹನಿಮೂನ್ ರದ್ದುಗೊಳಿಸಿ, ದೇಶ ಸೇವೆಗೆ ಹೋಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೋಸುರು ಗ್ರಾಮದ ಯೋಧ ಜಯವಂತ್ ಅವರು ಮೇ 1 ರಂದು ಮದುವೆಯಾಗಿ ಜಯವಂತ್​ ದಂಪತಿ ಊಟಿಗೆ ಹನಿಮೂನ್​ಗೆ ತೆರಳಿದ್ದರು. ಮೈಸೂರಿನಿಂದ ಊಟಿ ಕಡೆ ಹೊಗುತ್ತಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿದೆ. ಹೀಗಾಗಿ ಸೇನೆಯ ಕರೆಗೆ ಹನಿಮೂನ್ (Honeymoon) ಮೊಟಕುಗೊಳಿಸಿ, ಮದುವೆಯಾಗಿ 9 ದಿನಕ್ಕೆ ಪತ್ನಿಯನ್ನು ಬಿಟ್ಟು ಯುದ್ದಕ್ಕಾಗಿ ಛತ್ತೀಸಗಡದ ತನ್ನ ಬೆಟಾಲಿಯಬ್​ಗೆ ತೆರಳಿದ್ದಾರೆ.

ಇನ್ನು ಯೋಧ ಜಯವಂತ್ ಅವರಿಗೆ ಸನ್ಮಾನ ಮಾಡಿ, ಗೆದ್ದು ಬಾ ಎಂದು ಸಿದ್ದಾಪುರ ಜನತೆ ಹಾರೈಸಿ ಕಳುಹಿಸಿದ್ದಾರೆ.

Comments are closed.