Puttur: ಉದ್ಯಮಿ ರಾಜಾರಾಮ್‌ ಭಟ್‌ ಎಡಕ್ಕಾನ ವಿದೇಶದಲ್ಲಿ ಹೃದಯಾಘಾತದಿಂದ ಸಾವು!

Share the Article

Dakshina Kannada: ಉದ್ಯಮಿ ಎಡಕ್ಕಾನ ರಾಜರಾಮ ಭಟ್‌ ಅವರು ಇಂದು ಮುಂಜಾನೆ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್‌ ಅವರು ಎಡಕ್ಕಾನ ಟ್ರೇಡರ್ಸ್‌ ಎಂಬ ವ್ಯಾಪಾರ ಮಳಿಗೆಯಲ್ಲಿ ಹೊಂದಿದ್ದು, ದುಬೈ, ಮಸ್ಕತ್‌ಗಳಲ್ಲಿ ಖರ್ಜೂರದ ವ್ಯಾಪಾರ ಹೊಂದಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಇಂದು (ಮಂಗಳವಾರ) ಮುಂಜಾನೆ ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

Comments are closed.