Shashi Tharoor: ಪಹಲ್ಗಾಂ ಘಟನೆ ಕೇಂದ್ರದ ಗುಪ್ತಚರ ವೈಫಲ್ಯ ಅಲ್ಲ-ಶಶಿ ತರೂರ್!

Shashi Tharoor: ‘ಯಾವುದೇ ದೇಶ ನೂರಕ್ಕೆ ನೂರು ಗುಪ್ತಚರ ಭದ್ರತೆಯನ್ನು ಹೊಂದಿರಲು ಸಾಧ್ಯವಿಲ್ಲ. ಪಹಲ್ಗಾಂ ದಾಳಿಯಲ್ಲಿ ಗುಪ್ತಚರ ವೈಫಲ್ಯವಾಗಿರುವುದು ಹೌದಾದರೂ, ಅದಕ್ಕೆ ಕೇಂದ್ರ ಸರ್ಕಾರವನ್ನು ಹೊಣೆಗಾರನನ್ನಾಗಿಸುವುದಕ್ಕಿಂತ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸುವತ್ತ ಮೊದಲು ಗಮನಹರಿಸಬೇಕು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Pakistan : ಯುದ್ಧದ ಭಯ- ಪಾಕಿಸ್ತಾನದಲ್ಲಿ ಸೈನಿಕರ ಸಾಮೂಹಿಕ ರಾಜೀನಾಮೆ!!
ಈ ಮೂಲಕ ಘಟನೆ ಖಂಡಿಸುವ ಬದಲು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ಸೇರಿದಂತೆ ವಿಪಕ್ಷನಾಯಕರ ಹೇಳಿಕೆಗೆ ಟಾಂಗ್ನೀಡಿದ್ದಾರೆ.
Mangaluru: ದೇಶಕ್ಕೆ ಮಾಡಿದ ಅಪಮಾನ’ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಕ್ಯಾ. ಚೌಟ ಆಕ್ರೋಶ!
ಜೊತೆಗೆ ‘ಉರಿ ದಾಳಿಯ ನಂತರ, ಸರ್ಕಾರ ಗಡಿಯಾಚೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಪುಲ್ವಾಮಾ ನಂತರ ಬಾಲ ಕೋಟ್ ವಾಯುದಾಳಿ ನಡೆಯಿತು. ಇಂದು, ನಾವು ಅದಕ್ಕಿಂತ ಹೆಚ್ಚಿನದನ್ನು ನೋಡಲಿದ್ದೇವೆ. ನಮಗೆ ಹಲವಾರು ಆಯ್ಕೆಗಳಿವೆ. ರಾಜತಾಂತ್ರಿಕ, ಆರ್ಥಿಕ, ಗುಪ್ತಚರ ಹಂಚಿಕೆ, ರಹಸ್ಯ ಮತ್ತು ಬಹಿರಂಗ ಕ್ರಮಗಳಿವೆ. ಆದರೆ ಈಗ ಮಿಲಿಟರಿ ಪ್ರತಿಕ್ರಿಯೆ ಅನಿವಾರ್ಯ’ ಎಂದರು.
Comments are closed.