Udupi: ಹೆಬ್ರಿ : ಹೊಳೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು !!

Udupi: ಹೆಬ್ರಿಯ ಸೀತಾನದಿ ಹೊಳೆಯಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಬ್ರಿ ಕಿನ್ನಿಗುಡ್ಡೆ ನಿವಾಸಿ ಇಪ್ಪತ್ನಾಲ್ಕು ವರ್ಷದ ಸಂಕೇತ್ ಶೆಟ್ಟಿ ಮೃತ ದುರ್ದೈವಿಯಾಗಿದ್ದಾನೆ.
ತನ್ನ ಗೆಳೆಯರೊಂದಿಗೆ ಮೃತ ಯುವಕ ನದಿಗೆ ಸ್ನಾನಕ್ಕೆ ತೆರಳಿದಾಗ ಕಾಲು ಜಾರಿ ಬಿದ್ದಿದ್ದಾರೆ. ಸಂಕೇತ್ ಅವರು ಹೆಬ್ರಿಯ ಜೆಸಿಐ ಮತ್ತು ಇನ್ನಿತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
Comments are closed.