Kundapura: ಬಸ್ರೂರು ಮಹಾತೊಬಾರ ಶ್ರೀ ಮಹಾಲಿಂಗೇಶ್ವರ ಗುಡಿಯ‌ ಕಳಶದಲ್ಲಿ ಶಾಸನ ಪತ್ತೆ!

Share the Article

Kundapura: ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಹಾತೊಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ದೇವಿ ಅಮ್ಮನವರ ಹಿಂದಿನ ಗುಡಿಯ‌ ಕಳಶದಲ್ಲಿ ಶಾಸನ ಪತ್ತೆಯಾಗಿದೆ.

ಶಾಸನ ಒಂದು ಸಾಲಿನದ್ದಾಗಿದ್ದು‌ ,ಶಾಸನದಲ್ಲಿ ಸೇವೆ‌ ನೀಡಿದವರು ಹಾಗೂ ಕಾಲಮಾನ ಉಲ್ಲೇಖಿಸಲಾಗಿದೆ.

ಶಾಸನದ ಪಠ್ಯದಂತೆ

ಬಾ ದೇವಿ ಅಂಮನವರ ಸ್ಥಳಕ್ಕೆ ಕಂಚಗಾರ ಪರಮೇಶ್ವರ ಸ ಸೇವೆ ೧೮೯೯

ಅಥ೯ ‌: ದೇವಿ ಅಮ್ಮನವರ ಸನ್ನಿಧಿಗೆ ಕಂಚುಗಾರ ಪರಮೇಶ್ವರ ರು ಸೇವೆ‌ನೀಡಿರುವುದಾಗಿದೆ.‌ ಇದರ ಕಾಲಮಾನ‌ ಕ್ರಿ‌ಶ ತಾರೀಕು ದಿನ 1 ತಿಂಗಳು ಅಸ್ಷಷ್ಠವಾಗಿರುತ್ತದೆ ಇಸವಿ 1899 ಅಂದರೆ 126 ವಷ೯ದ್ದಾಗಿದೆ.

ಈ ಚಿಕ್ಕ ಶಾಸನವನ್ನು ಪ್ರದೀಪ ಕುಮಾರ ಬಸ್ರೂರು ಪತ್ತೆ ಹಚ್ಚಿದ್ದು, ಇವರಿಗೆ ಇವರಿಗೆ ಅಭಿಷೇಕ್ ಮೊಗವೀರ ಬಾಳೆಹಿತ್ಲು, ಹಾಗೂ ದೇವಸ್ಥಾನದ ಸಿಬ್ಬಂದಿ ಸುಮಂತ ಸಹಕಾರ ನೀಡಿರುತ್ತಾರೆ.

Comments are closed.