Fire: ಬೆಂಗಳೂರು-ಮಂಗಳೂರು ಹೈವೆಯಲ್ಲಿ ಹೊತ್ತಿ ಉರಿದ ಬಸ್, 25 ಪ್ರಯಾಣಿಕರು ಪಾರು!!

Fire: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ಒಂದು ಹೊತ್ತಿ ಉರಿದಿದ್ದು ಅದರಲ್ಲಿರುವ 25 ಪ್ರಯಾಣಿಕರು ಅದೃಷ್ಟವೆಂಬಂತೆ ಪಾರಾಗಿದ್ದಾರೆ.
ನಾಗಮಂಗಲದ ಕದಬಹಳ್ಳಿ ಬಳಿ ಬೆಳಗಿನ ಜಾವ 5:00 ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವೆಂಬಂತೆ ಬಸ್ನಲ್ಲಿದ್ದ 25 ಪ್ರಯಾಣಿಕರು ಪಾರಾಗಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಿ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಿಲ್ಲಿಸುತ್ತಿದ್ದಂತೆ ಸ್ಥಳದಲ್ಲೇ ಬಸ್ ಹೊತ್ತಿ ಉರಿದು ಭಸ್ಮವಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
Comments are closed.