Kerala : ಆ ಇಬ್ಬರು ಸೇರಿ ನನ್ನನ್ನು ಬೆತ್ತಲೆಗೊಳಿಸಲು ಯತ್ನಿಸಿದರು, ಶಾಕಿಂಗ್ ಹೇಳಿಕೆ ನೀಡಿದ ಮಹಿಳಾ ಜಿಲ್ಲಾಧಿಕಾರಿ

Female District Collector : ಮಹಿಳಾ ಜಿಲ್ಲಾಧಿಕಾರಿಯೊಬ್ಬರು (Female District Collector) ತಮ್ಮನ್ನು ಬೆತ್ತಲೆ ಗೊಳಿಸಲು ಯತ್ನಿಸಿದ ಘಟನೆಯ ಬಗ್ಗೆ ಶಾಕಿಂಗ್ ವಿಷಯವನ್ನು ಹೇಳಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ತಮ್ಮ ಜೀವನದಲ್ಲಾದ ಕರಾಳ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಅವರು ಆರನೇ ವಯಸ್ಸಿನಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮತ್ತು ಆ ನೋವಿನಿಂದ ಹೊರಬಂದಿದ್ದು ಹೇಗೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ನಾನು ಕೇವಲ ಆರನೇ ವಯಸ್ಸಿನಲ್ಲಿ ಈ ಕೆಟ್ಟ ಅನುಭವವನ್ನು ಎದುರಿಸಿದೆ. ಆ ಇಬ್ಬರು ವ್ಯಕ್ತಿಗಳ ಮುಖಗಳು ನನಗೆ ಸರಿಯಾಗಿ ನೆನಪಿಲ್ಲ. ಅವರು ನನ್ನನ್ನು ಪ್ರೀತಿಯಿಂದ ಅವರ ಬಳಿಗೆ ಕರೆದು ನನ್ನ ದೇಹವನ್ನು ಎಲ್ಲೆಲ್ಲೋ ಮುಟ್ಟಿದರು. ನನ್ನ ಬಟ್ಟೆಗಳನ್ನು ಕಳಚಿ, ಬೆತ್ತಲೆಗೊಳಿಸಲು ಯತ್ನಿಸಿದರು. ಆಗ ಏನೋ ಅನಿರೀಕ್ಷಿತ ಘಟನೆ ನಡೆಯಲಿದೆ ಎಂಬುದು ನನಗೆ ಅರ್ಥವಾಗಲು ಆರಂಭವಾಯಿತು. ಆಗ ನಾನು ಹೇಗೋ ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಓಡಿ ಹೋದೆ. ನನಗೆ ಆ ಸಮಯದಲ್ಲಿ ಓಡಿ ಹೋಗಬೇಕೆಂದು ಅನಿಸಿತು. ನಾನು ಅವರಿಂದ ತಪ್ಪಿಸಿಕೊಂಡೆ. ಆದರೆ, ಎಲ್ಲ ಮಕ್ಕಳೂ ಹಾಗೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಾ ಅವರು ಹೇಳಿದ್ದಾರೆ.

ಈಗಲೂ ನಾನು ಜನಸಂದಣಿಯನ್ನು ಕಂಡಾಗ, ಅಲ್ಲಿ ಆ ಎರಡು ಮುಖಗಳು ಇವೆಯೇ ಎಂದು ಹುಡುಕುತ್ತೇನೆ. ಈಗಲೂ ನಾನು ಎಲ್ಲರನ್ನೂ ಎಚ್ಚರಿಕೆಯಿಂದ ನೋಡುತ್ತೇನೆ. ಇಂತಹಾ ಕರಾಳ ಘಟನೆಗಳು ನಡೆದರೆ ಅದು ಅಮಾಯಕ ಮಕ್ಕಳ ಜೀವನದದುದ್ದಕ್ಕೂ ಕಾಡುತ್ತದೆ. ನನಗೆ ನನ್ನ ಪಾಲಕರು ಮಾನಸಿಕವಾಗಿ ತುಂಬಾ ಬೆಂಬಲ ನೀಡಿದ್ದರಿಂದ ನಾನು ಆ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದವರು ಹೇಳಿದ್ದಾರೆ.

ಕೇರಳದ ಪಟ್ಟಣಂತಿಟ್ಟ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಕುರಿತು ವರದಿ ಮಾಡುವಾಗ ಅವರು.ಮಾತಾಡುತ್ತಿದ್ದರು. ಆಗ ಗಮನಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಉದ್ಘಾಟಿಸಿ ಮಾತನಾಡಿ ತನ್ನ ಜೀವನದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

Leave A Reply

Your email address will not be published.