ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು|

ವಿಟ್ಲ: ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿಯೋವ೯ ಮೃತಪಟ್ಟ ದಾರುಣ ಘಟನೆ ವಿಟ್ಲದ ಎನ್ಮಕಜೆ ಪಂಚಾಯತ್ ನ ಅಡ್ಯನಡ್ಕ ಸಮೀಪದ ಒಂದನೇ ವಾರ್ಡ್ ಸಾಯ ಎಂಬಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಾಯ ನಿವಾಸಿ ನಾರಾಯಣ ನಾಯ್ಕ ಎಂಬುವವರ ಪುತ್ರ ಜಿತೇಶ್ (17) ಎಂದು ಗುರುತಿಸಲಾಗಿದೆ.

ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಈ ದುರ್ಘಟನೆಗೆ ಕಾರಣ ಎಂಬ ಸಂಶಯ ವ್ಯಕ್ತವಾಗಿದ್ದು, ಸ್ಥಳೀಯ ಸಿಪಿಐಎಂ ಕಾರ್ಯಕರ್ತರು ವಿದ್ಯುತ್ ಅಳವಡಿಸಿ ದುರ್ಘಟನೆ ನಡೆದ ನಂತರ ವಿದ್ಯುತ್ ಉಪಕರಣಗಳನ್ನು ಕಿತ್ತೆಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.