ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್, ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ – ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್

ಕರಾವಳಿಯ ಜನರಲ್ಲಿ ಭಯ ಹುಟ್ಟಿಸುವಂತಹ ಮತ್ತೊಂದು ಅಚ್ಚರಿಯ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಹೌದು!!.ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದ ಜನತೆಗೆ ಎಚ್ಚರಿಕೆ ನೀಡುವ ರೀತಿ ಕಂಡು ಬರುತ್ತಿದೆ.ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರನಾಗಿದ್ದು, ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿದೆ ಎಂಬ ಸತ್ಯ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರ ಕೋಟೆಯಂತೆ ಮಾರ್ಪಟ್ಟಿದ್ದು, ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಿ ಮುಂದಿನ ದಾಳಿಗೆ ಅಣಿ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸುವ ಕುರಿತು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ‘ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನ ನಡೆಸಿದ್ದರೂ ಕೂಡ ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ .ಈ ನಡುವೆ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಕೂಡ ಬಂಧಿಸಲು ಪ್ರಯತ್ನ ನಡೆಸಿ ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಇದರ ಜೊತೆಗೆ ಅತಿ ಶೀಘ್ರದಲ್ಲಿ ಮತ್ತೊಂದು ದಾಳಿಗೆ ಅಣಿಯಾಗುವ ಬೆದರಿಕೆಯನ್ನು ಉಗ್ರ ಪಡೆ ಮಾಡಿದೆ.

ಮಾಧ್ಯಮ ಹೇಳಿಕೆಯಲ್ಲಿ ಏನಿದೆ?

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನ ಒಂದು ಹಾಳೆಯ ಮಾಧ್ಯಮ ಹೇಳಿಕೆಯು ಇಂಗ್ಲಿಷ್​ನಲ್ಲಿದ್ದು, ಕರಪತ್ರದ ವಿನ್ಯಾಸವನ್ನು ಹೋಲುತ್ತಿದ್ದು, ಅದರ ಮೇಲೆ 23 ನವೆಂಬರ್, 2022 ಎಂಬ ದಿನಾಂಕವನ್ನು ಕೂಡ ಉಲ್ಲೇಖ ಮಾಡಲಾಗಿದೆ.

‘ಅಲ್ಲಾಹನು ಹೇಳುತ್ತಾನೆ: ಯಾರ ವಿರುದ್ಧ ಅಕ್ರಮವಾಗಿ ಯುದ್ಧ ಮಾಡಲಾಗುತ್ತಿದೆಯೋ ಅವರಿಗೆ ಹೋರಾಡಲು ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಅನ್ಯಾಯಕ್ಕೊಳಗಾದವರು (ಅಲ್-ಕುರಾನ್)’ ಎಂಬ ಸಾಲುಗಳು ಮೊದಲಿನ ಪ್ಯಾರಗಳಲ್ಲಿ ಹೇಳಲಾಗಿದ್ದು, ಅದನ್ನು ಹೈ ಲೈಟ್ ಮಾಡಲಾಗಿದೆ.

ಇದರ ನಂತರದ ಸಾಲುಗಳು ಹೀಗಿವೆ:

‘ನಾವು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಸಂದೇಶವನ್ನು ರವಾನಿಸಲು ಇಚ್ಚಿಸುತ್ತೇವೆ: ನಮ್ಮ ಮುಜಾಹಿದ್ ಸಹೋದರ ಮೊಹಮ್ಮದ್ ಶಾರಿಕ್ ಕೇಸರಿ ಭಯೋತ್ಪಾದಕರ ಭದ್ರಕೋಟೆಯಾದ ಮಂಗಳೂರಿನ ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದ. ಈ ಕಾರ್ಯಾಚರಣೆಯು ಅದರ ಉದ್ದೇಶಗಳನ್ನು ಪೂರೈಸದಿದ್ದರೂ ಕೂಡ ರಾಜ್ಯ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಗಳು ಸೋದರನನ್ನು ಅನುಸರಿಸುತ್ತಿದ್ದರೂ ಕೂಡ ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರು ಸಹಿತ ನಾವು ಅದನ್ನು ತಾಂತ್ರಿಕ ದೃಷ್ಟಿಕೋನದಿಂದ ಯಶಸ್ವಿ ಎಂದೇ ಪರಿಗಣಿಸುತ್ತೇವೆ. ಏಕೆಂದರೆ, ಅವರು ದಾಳಿಯನ್ನು ಸಿದ್ಧಪಡಿಸಿದ್ದು ಅಷ್ಟೇ ಅಲ್ಲದೆ ಅನುಷ್ಠಾನಕ್ಕೆ ತಂದಿದ್ದಾರೆ.

’ಸಹೋದರನ ಬಂಧನಕ್ಕೆ ಕಾರಣವಾದ ಅಕಾಲಿಕ ಸ್ಫೋಟಕ್ಕೆ ಸಂಬಂಧಿಸಿದಂತೆ, ಇದು ಎಲ್ಲಾ ಮಿಲಿಟರಿ ಮತ್ತು ವಿಧ್ವಂಸಕ ಕಾರ್ಯಾಚರಣೆಗಳೊಂದಿಗೆ ಯಾವಾಗಲೂ ಇರುವ ಸಾಧ್ಯತೆಯಾಗಿದ್ದು, ಸಹೋದರನ ಬಂಧನದಿಂದ ಸಂತೋಷಪಡುತ್ತಿರುವವರಿಗೆ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ವಿಶೇಷವಾಗಿ ಅವರಂತಹವರು ಗಮನಿಸಲೇಬೇಕು.

” ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲೇ ಪಡೆಯಲಿದ್ದಿರಿ ಏಕೆಂದರೆ, ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ”

ಇದರ ಜೊತೆಗೆ “ನೀವು ಯಾಕೆ ದಾಳಿ ಮಾಡಿದ್ದೀರಿ?” ಎಂದು ಕೇಳುವವರಿಗೆ ನಾವು ಉತ್ತರ ನೀಡಲು ಕೂಡ ಸಿದ್ದವಿದ್ದೇವೆ.. ಏಕೆಂದರೆ ನಾವು ಈ ಯುದ್ಧಕ್ಕೆ ಮತ್ತು ಫ್ಯಾಸಿಸ್ಟ್‌ಗಳ ಪ್ರತಿರೋಧದ ಹಾದಿಗೆ ಬಲವಂತದಿಂದ ಹೆಜ್ಜೆ ಇಟ್ಟಿದ್ದೇವೆ.ರಾಜ್ಯದಲ್ಲಿರುವ ಭಯೋತ್ಪಾದನೆಯ ಕೆಟ್ಟ ರೂಪಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ ಅಲ್ಲದೆ, ನಮ್ಮ ಮೇಲೆ ಮುಕ್ತ ಸಮರ ಘೋಷಿಸಿರುವುದರಿಂದ, ಗುಂಪು ಹಲ್ಲೆಯು ಚಾಲ್ತಿಯಲ್ಲಿದ್ದು, ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ದಬ್ಬಾಳಿಕೆಯ ಕಾನೂನುಗಳು ಮತ್ತು ಅಂಥ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದ, ಇಷ್ಟೇ ಅಲ್ಲದೆ, ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುವಂತೆ ನರಳುವಂತೆ ಮಾಡಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ.

ಏಕೆಂದರೆ ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗಳೊಂದಿಗೆ ಪ್ರತಿಧ್ವನಿಸುತ್ತವೆ. ಮುಸ್ಲಿಮರಾಗಿ ನಾವು ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಎದುರಿಸಿದಾಗ ಜಿಹಾದ್ ನಡೆಸಲು ಆದೇಶಿಸಲಾಗಿದೆ’ ಎಂದು ಹೇಳಿಕೆಯು ಮುಕ್ತಾಯಗೊಂಡಿದೆ.

ಹೇಳಿಕೆಯ ಕೊನೆಯಲ್ಲಿ ಮತ್ತೊಂದು ವಿಚಾರವನ್ನು ಉಗ್ರರು ಸ್ಪಷ್ಟಪಡಿಸಿದ್ದು,

‘ಮುಂದೆ ಯಾವುದಾದರೂ ಕೃತ್ಯ ನಡೆದ ನಂತರವೇ ನಾವು ಹೇಳಿಕೆ ನೀಡುತ್ತೇವೆ. ನಮ್ಮ ಹೆಸರಿನಲ್ಲಿ ಬಿಡುಗಡೆಯಾಗುವ ಯಾವುದೇ ಹೇಳಿಕೆಯ ಹೊಣೆಯನ್ನು ನಾವು ಹೊರುವುದಿಲ್ಲ’ ಎಂದು ಬೆದರಿಕೆಯ ಜೊತೆಗೆ ನಾವು ಮಾಡಿದ್ದೆ ಸರಿ ಎಂಬ ರೀತಿ ಸ್ಪಷ್ಟಣೆ ಕೂಡ ನೀಡಿದ್ದಾರೆ.

Leave A Reply

Your email address will not be published.