ಬೇರೆಯವನ ಹೆಂಡತಿ ಜೊತೆ ಪ್ರಿಯಕರನ ಪಲ್ಲಂಗದಾಟ | ಎಂಟ್ರಿ ಕೊಟ್ಟ ಪ್ರಿಯತಮೆಯ ಗಂಡ , ನಂತರ ನಡೆದೇ ಹೋಯ್ತು ಹೈಡ್ರಾಮಾ

ಬೆಂಗಳೂರಿನಲ್ಲಿ ಪ್ರಿಯಕರನೊಬ್ಬ ಪ್ರೇಯಸಿಯ ಜೊತೆ ಏಕಾಂತದಲ್ಲಿದ್ದಾಗ ಪ್ರಿಯತಮೆಯ ಗಂಡನ ಎಂಟ್ರಿಯಾಗಿ ಹೈಡ್ರಾಮಾವೊಂದು ನಡೆದಿದೆ. ಆ ವೇಳೆ ಪ್ರಿಯಕರ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅಸ್ಸಾಂ ಮೂಲದ ಮುಕುಂದ್ ಖೌಂದ್ (36) ಬಂಧಿತ ಪ್ರಿಯಕರ. ಪ್ರೇಯಸಿಯ ಗಂಡನಿಂದ ತಪ್ಪಿಸಿಕೊಳ್ಳಲು ಹೆಚ್ಎಎಲ್ ಗೇಟ್ ಮೇಲೆ ಹಾರಿದ್ದನು. ಈ ವೇಳೆ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಪೂರ್ವಿ ಡೋಲೈ ಎಂಬಾಕೆಯ ಜೊತೆ ಮುಕುಂದ್ ಖೌಂದ್ ಅಕ್ರಮ ಸಂಬಂಧ ಹೊಂದಿದ್ದನು. ಪೂರ್ವಿ ಡೋಲೈ ಪತಿ ಬಿಪುಲ್ ಡೋಲೈ ಹೆಎಚ್ಎಲ್ ನ ಖಾಸಗಿ ಕಂಪನಿಯಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ನವೆಂಬರ್ 9ರಂದು ಪೂರ್ವಿ ಮತ್ತು ಮುಕುಂದ್ ಇವರಿಬ್ಬರು ಕೆ.ಆರ್.ಪುರಂ ರೈಲ್ವೇ ನಿಲ್ದಾಣದಲ್ಲಿ ಇದ್ದಾರೆ ಎಂದು ಪತಿಗೆ ಗೊತ್ತಾಗಿದೆ. ಈ ಇಬ್ಬರನ್ನು ಯಮಲೂರಿನಲ್ಲಿರುವ ಮನೆಗೆ ಕರೆತಂದಿದ್ದನು. ನಂತರ ಮನೆಯಲ್ಲಿ ಮೂವರ ನಡುವೆಯು ಭಾರೀ ಜಗಳ ಶುರುವಾಗಿದೆ.

ಆಕೆಯ ಪತಿ ಬಿಪುಲ್ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ‌ ನೀಡಲು ಮುಂದಾಗಿದ್ದಾನೆ. ಇದರಿಂದ ಭಯಭೀತನಾಗಿ ಮುಕುಂದ್​ ಮನೆಯಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಮುಕುಂದ್ ಮನೆಯ ಸಮೀಪದಲ್ಲಿದ್ದ ಹೆಚ್​​ಎಎಲ್​ ಗೇಟ್ ಜಿಗಿದು ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದ್ದಾನೆ.

ಈ ವೇಳೆ ಮುಕುಂದ್​ನನ್ನು ನೋಡಿದ ಹೆಚ್​ಎಎಲ್ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲು ಭದ್ರತಾ ಸಿಬ್ಬಂದಿ ಮುಕುಂದ್​​ನನ್ನು ಕಳ್ಳ ಎಂದು ಭಾವಿಸಿದ್ದರು. ಆದರೆ ನಂತರ ವಿಚಾರಣೆ ನಡೆಸಿದಾಗ ಮುಕುಂದ್ ನಡೆದ ಘಟನೆಯನ್ನು ಹೇಳಿದ್ದಾನೆ.

ವಿಚಾರಣೆ ಬಳಿಕ ಮುಕುಂದ್ ವಿರುದ್ಧ ಹೆಎಚ್ಎಎಲ್ ಸೆಕ್ಯೂರಿಟಿ ಇನ್​ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್​​ಎಎಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಮುಕುಂದ್​ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​​ ಮಾಡಲಾಗಿದೆ.

ಈ ಘಟನೆಯು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರ ಎರಡು ದಿನ ಮುಂಚಿತವಾಗಿ ನಡೆದಿತ್ತು. ಹಾಗಾಗಿ ಹೆಚ್ಎಎಲ್​​ನಲ್ಲಿ ಭದ್ರತಾ ಲೋಪ ಎಂದು ಹೇಳಲಾಗಿತ್ತು. ಇದೀಗ ಘಟನೆ ಬಗ್ಗೆ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.