ನಾಗರಿಕರ ಹೋರಾಟಕ್ಕೆ ಜಯ : ಸುರತ್ಕಲ್ ಟೋಲ್ ಸಂಗ್ರಹ ರದ್ದು

ಮಂಗಳೂರು:ಇಲ್ಲಿನ ಸುರತ್ಕಲ್ ಸಮೀಪ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ರದ್ದು ಪಡಿಸಬೇಕು ಎನ್ನುವ ಹಲವು ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದ್ದು,ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಬೃಹತ್ ಪ್ರತಿಭಟನೆ ನಡೆದಿದ್ದು,ಪ್ರತಿಭಟನಾ ಕಾರರರೇ ಟೋಲ್ ಗೇಟ್ ತೆರವುಗೊಳಿಸುವುದಾಗಿ ಘೋಷಿಸಿದ್ದರಿಂದ ರಾತ್ರೋ ರಾತ್ರಿ ಪ್ರತಿಭಟನೆ ನಡೆಸದಂತೆ ಪೊಲೀಸರು ಪ್ರತಿಭಟನೆಯ ಪ್ರಮುಖರ ಮನೆಗಳಿಗೆ ತೆರಳಿ ನೋಟೀಸ್ ನೀಡಿದ್ದರು.

ಬಳಿಕ ಪ್ರತಿಭಟನೆ ನಡೆದು, ಆ ಬಳಿಕ ಟೋಲ್-ಟ್ರೋಲ್ ವಿರುದ್ಧ ಪ್ರಕರಣ ದಾಖಲಾಗಿ,ಸಚಿವ, ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗಿ, ಅನಿರ್ದಿಷ್ಟಾವಧಿ ಸತ್ಯಾಗ್ರಹ ಕಳೆದ ಹದಿನೇಳು ದಿನಗಳಿಂದ ಟೋಲ್ ಪಕ್ಕದಲ್ಲೇ ನಡೆಯುತ್ತಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರದ ಗಮನಸೆಳೆದು, ಸದ್ಯ ಟೋಲ್ ರದ್ದು ಮಾಡುವ ತಾಂತ್ರಿಕ ಅಂಶ ದೊರಕಿದಂತಾಗಿದೆ ಎಂದು ನಾಗರಿಕರ ಪರವಾಗಿ ಕೇಂದ್ರ ಸಚಿವರುಗಳು ಹಾಗೂ ಪ್ರಧಾನಿಗೆ ನಾಗರಿಕರ ಪರವಾಗಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

Leave A Reply

Your email address will not be published.