ಹತ್ತಿ ಬೆಳೆಗಾರರಿಗೆ 75 ಸಾವಿರ ಕಪಾಸ್ ಪ್ಲಕ್ಕರ್ ಯಂತ್ರಗಳನ್ನು ಒದಗಿಸಲು ಧನಸಹಾಯ : ಸರ್ಕಾರದಿಂದ ಸಿಹಿಸುದ್ದಿ

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಈ ನಡುವೆ ಸರ್ಕಾರ ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.

ಹತ್ತಿ ಉತ್ಪಾದಕತೆ ಹೆಚ್ಚಿಸಲು, ಉತ್ತಮ ಗುಣಮಟ್ಟದ ಹತ್ತಿ ಬೀಜಗಳ ಪೂರೈಕೆ ಅಗತ್ಯವಾಗಿದ್ದು, ಇದಕ್ಕೆ ಅವಶ್ಯಕವಾಗಿರುವ ಹತ್ತಿ ಬೆಳೆಗಾರರಿಗೆ 75 ಸಾವಿರ ಕಪಾಸ್ ಪ್ಲಕ್ಕರ್ ಯಂತ್ರಗಳನ್ನು ಒದಗಿಸಲು ಧನಸಹಾಯ ನೀಡುವ ಕುರಿತಾಗಿ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ಹತ್ತಿ ಮೌಲ್ಯ ಸರಪಳಿಯ ಉಪಕ್ರಮಗಳ ಪ್ರಗತಿ ಪರಿಶೀಲನೆಯ ನಿಟ್ಟಿನಲ್ಲಿ ನವದೆಹಲಿಯ ವಾಣಿಜ್ಯ ಭವನದಲ್ಲಿಂದು ಜವಳಿ ಸಲಹಾ ಗುಂಪಿನ (ಟಿಎಜಿ) ಜತೆ 3ನೇ ಸಂವಾದ ಸಭೆ ನಡೆಸಿದ್ದಾರೆ.

ಹತ್ತಿ ಉತ್ಪಾದಕತೆ ಹೆಚ್ಚಿಸುವ ಸಮಗ್ರ ಯೋಜನೆಯ ವಿವರಗಳನ್ನು ನಾಗ್ಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ (ಸಿಐಸಿಆರ್) ಪ್ರಸ್ತುತಪಡಿಸಲಾಗಿದ್ದು, ಇದನ್ನು ಪರಿಶೀಲನೆ ನಡೆಸಿದ ಬಳಿಕ ಭಾರತೀಯ ಹತ್ತಿಯನ್ನು ಬ್ರ್ಯಾಂಡಿಂಗ್ ಮಾಡಲು ಇದು ಸೂಕ್ತ ಸಮಯ ವಾಗಿದ್ದು,ಕಸ್ತೂರಿ ಬ್ರಾಂಡ್ ಉತ್ಪನ್ನಗಳು ಗ್ರಾಹಕರ ವಿಶ್ವಾಸ ಮತ್ತು ಆಕರ್ಷಣೆಗೆ ಒಳಗಾಗಿವೆ. ಹಾಗಾಗಿ, ಇದು ಆತ್ಮನಿರ್ಭರ್ ಭಾರತದ ಕಡೆಗೆ ಸಾಗಲು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಗೋಯಲ್ ಹೇಳಿದ್ದಾರೆ.

ಹತ್ತಿ ಉದ್ಯಮವು ಮುಂಚೂಣಿಯಲ್ಲಿರಬೇಕು ಮತ್ತು ಭಾರತೀಯ ಹತ್ತಿ ಕಸ್ತೂರಿಯನ್ನು ಬ್ರ್ಯಾಂಡಿಂಗ್ ಮಾಡಲು ಮತ್ತು ಪ್ರಮಾಣೀಕರಿಸುವ ಜವಾಬ್ದಾರಿ ಹೊರುವ ಮೂಲಕ ಸ್ವಯಂ ನಿಯಂತ್ರಣ ತತ್ವದ ಮೇಲೆ ಕೆಲಸ ಮಾಡಬೇಕು ಇದಲ್ಲದೆ, ಭಾರತೀಯ ಹತ್ತಿ ನಾರಿನ ಗುಣಮಟ್ಟ ಅತ್ಯುನ್ನತವಾಗಿದೆ. ಆದ್ದರಿಂದ ಬಿಐಎಸ್ ಕಾಯಿದೆ 2016ರ ಅಡಿ, ಹತ್ತಿ ಬೇಲ್‌ಗಳ ಗುಣಮಟ್ಟ ನಿಯಂತ್ರಣ ಆದೇಶ ಅನುಷ್ಠಾನವು ತಾಂತ್ರಿಕ ಗುಣಮಟ್ಟದ ನಿಯತಾಂಕಗಳ ವಿಷಯದಲ್ಲಿ ಹತ್ತಿ ಬೇಲ್‌ಗಳನ್ನು ಪ್ರಮಾಣೀಕರಿಸಲು ಮತ್ತು ಎಲ್ಲಾ ಪಾಲುದಾರರ ಪ್ರಯೋಜನಕ್ಕಾಗಿ ಹತ್ತಿ ಬೇಲ್ ಪತ್ತೆ ಹಚ್ಚುವಿಕೆ ಮತ್ತು ಗುರುತಿಸುವುದು ಅತ್ಯಗತ್ಯ ಎಂದು ಗೋಯಲ್ ಅಭಿಪ್ರಾಯ ಪಟ್ಟಿದ್ದಾರೆ.

ಕಸ್ತೂರಿ ಹತ್ತಿಯ ಗುಣಮಟ್ಟ, ಪತ್ತೆ ಹಚ್ಚುವಿಕೆ ಮತ್ತು ಬ್ರ್ಯಾಂಡಿಂಗ್‌ನಲ್ಲಿ ಕೆಲಸ ಮಾಡಲು ಉದ್ಯಮ ಮತ್ತು ಅದರ ನಾಮನಿರ್ದೇಶಿತ ಸಂಸ್ಥೆಗಳು ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಉದ್ಯಮದ ಕೊಡುಗೆಗಳಿಗೆ ಹೊಂದಿಕೆಯಾಗುವ ನಿಧಿಗಳನ್ನು ಒದಗಿಸುವ ಉಪಕ್ರಮಗಳನ್ನು ಸರ್ಕಾರವು ಬೆಂಬಲಿಸುತ್ತದೆ ಎಂದಿದ್ದಾರೆ.

ಕಸ್ತೂರಿ ಹತ್ತಿಯ ಮಾನದಂಡಗಳು, ಡಿಎನ್ಎ ಪರೀಕ್ಷೆ ಮತ್ತು ಪತ್ತೆ ಹಚ್ಚುವಿಕೆಗೆ ಅನುಗುಣವಾಗಿ ಅಗತ್ಯವಿರುವ ಪರೀಕ್ಷಾ ಸೌಲಭ್ಯವನ್ನು ಬಲಪಡಿಸಲು ಒತ್ತು ನೀಡಲಿದೆ. ಜೊತೆಗೆ ಬಿಐಎಸ್ ಮತ್ತು ಟಿಆರ್‌ಎ ಮೂಲಕ ಸಾಕಷ್ಟು ಆಧುನಿಕ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಹತ್ತಿಯ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ರಸಗೊಬ್ಬರ ಚೀಲಗಳ ಬಣ್ಣ ಬದಲಾವಣೆ (ರೈತರು ಹತ್ತಿ ಕೊಯ್ಲು ಮತ್ತು ಶೇಖರಣೆಯಲ್ಲಿ ಮರುಬಳಕೆ ಮಾಡುವ) ಮಾಡಬೇಕೆಂಬ ಉದ್ಯಮದ ಬೇಡಿಕೆಗೆ ಭಾರತ ಸರ್ಕಾರವು ಈ ಆತಂಕ ನಿವಾರಣೆ ಮಾಡುವ ಉದ್ದೇಶದಿಂದ ಲೋಗೊ ಮತ್ತು ಮಾದರಿಯನ್ನು ವ್ಯಾಖ್ಯಾನಿಸುವ ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯ ‘ಅಧಿಸೂಚನೆ’ ಹೊರಡಿಸಿದೆ .

ಹತ್ತಿ ಉತ್ಪಾದಕತೆ ಹೆಚ್ಚಿಸಲು ಪೂರಕವಾಗಿ, ಸಂಬಂಧಿತ ಸಚಿವಾಲಯಗಳಿಂದ ಸಮರೋಪಾದಿಯಲ್ಲಿ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹತ್ತಿಯ ಉತ್ಪಾದಕತೆ ಹೆಚ್ಚಿಸಲು ಹೆಚ್ಚಿನ ಇಳುವರಿ ನೀಡುವ ಹತ್ತಿ ಬೀಜಗಳಿಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳನ್ನು ಮತ್ತು ಹೆಚ್ಚಿನ ಸಾಂದ್ರತೆಯ ನಾಟಿ ವ್ಯವಸ್ಥೆಯಂತಹ ನವೀನ ಕೃಷಿಶಾಸ್ತ್ರ ಪರಿಚಯಿಸುವ ಅಗತ್ಯವಿದ್ದು ಸೂಕ್ತ ಕ್ರಮ ಕೈಗೊಳ್ಳಲಿದೆ.

ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವ ಸಿಮಾ-ಸಿಡಿಆರ್‌ಎ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೈಯಿಂದ ಹಿಡಿಯುವ ಕಪಾಸ್ ಪ್ಲಕ್ಕರ್ ಯಂತ್ರಗಳ ಬಳಕೆಯಿಂದ ಹತ್ತಿಯನ್ನು ಹೆಕ್ಕಿ ತೆಗೆಯುವ ಯಾಂತ್ರೀಕರಣ ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಜವಳಿ ಉದ್ಯಮ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಗೋಯಲ್ ಒತ್ತಾಯಿಸಿದ್ದಾರೆ.

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ವಿತರಣಾ ಬೆಂಬಲದೊಂದಿಗೆ ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಈ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುತ್ತದೆ.

ಕೈಗಾರಿಕಾ ಸಂಘಗಳು ಮತ್ತು ಉದ್ಯಮದ ಮುಖಂಡರು ಒಟ್ಟಾಗಿ 75,000 ಸಂಖ್ಯೆಯ ಕೈಯಲ್ಲಿ ಹಿಡಿಯುವ ಕಪಾಸ್ ಪ್ಲಕ್ಕರ್ ಯಂತ್ರಗಳಿಗೆ ಧನಸಹಾಯ ನೀಡಲು ಒಪ್ಪಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಹತ್ತಿ ಬೆಳೆಗಾರರನ್ನು ಸಶಕ್ತಗೊಳಿಸಲು ರೈತ ಉತ್ಪಾದಕ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.