ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆಯಿತು ಒಂದಲ್ಲ ಮೂರು ಕ್ರೈಂಗಳು | ಈ ಬಗ್ಗೆ ಎಸ್ ಪಿ‌ ಮಿಥುನ್ ಹೇಳಿದ್ದೇನು?

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಸಮಯದಲ್ಲಿ ಒಟ್ಟು ಮೂರು ಅಪರಾಧ ಕೃತ್ಯಗಳು ನಡೆದಿದ್ದು, ಶಾಂತವಾಗಿದ್ದ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ.

ತಡರಾತ್ರಿ ಯುವಕನೊಬ್ಬನ ಹತ್ಯೆ ನಡೆದಿದ್ದು, ಈ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಮಿಥುನ್, ನಗರದಲ್ಲಿ ತಡರಾತ್ರಿ ಒಟ್ಟು ಮೂರು ಪ್ರಕರಣ ನಡೆದಿವೆ . ಮೂರೂ ಪ್ರಕರಣಗಳೂ ಬೇರೆ ಬೇರೆಯಾಗಿವೆ ಎಂದಿದ್ದಾರೆ.

ಗೃಹಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯಾಗಿರುವ ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ಮತ್ತು ಹರ್ಷ ಮನೆ ಸಮೀಪ ಅವಾಚ್ಯ ಶಬ್ದದಿಂದ ಬೈದ ಘಟನೆ ನಡೆದಿದೆ.

ಈ ಪ್ರಕರಣದ ಕುರಿತಾಗಿ ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ಪಡೆ ಮುಂದಾಗಿದೆ. ಆರೋಪಿಗಳ ಬಂಧನಕ್ಕೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಯುತ್ತಿದೆ .

ಕೃತ್ಯ ನಡೆದ ಸ್ಥಳದಲ್ಲಿ ಕೆಎಸ್​ಆರ್​ಪಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗುವುದನ್ನು ತಪ್ಪಿಸಲು ನಗರದಲ್ಲಿ ನಾಳೆಯಿಂದಲೇ ಚೆಕ್​ಪೋಸ್ಟ್ ತೆರೆಯಲಾಗುತ್ತದೆ.

ಇದರ ಜೊತೆಗೆ ತ್ರಿಬಲ್ ರೈಡ್ ಹೋಗುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಲಿದ್ದು, ನಿನ್ನೆ ಹರ್ಷನ ಹಂತಕರನ್ನು ಎನ್​ಕೌಂಟರ್ ಮಾಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಮೃತ ಹರ್ಷನ ಸಹೋದರಿ ಅಶ್ವಿನಿ ಈ ಕುರಿತು ಮಾಧ್ಯಮದ ಮುಂದೆ ಕೋಪ ಹೊರಹಾಕಿದ್ದಾರೆ.

ನಿನ್ನೆ ಕೆಲವರು ಹರ್ಷರವರ ಮನೆ ಬಳಿ ಬಂದು ನಿಮ್ಮನ್ನ ಬಿಡಲ್ಲ ಎಂದು ಧಮ್ಕಿ ಹಾಕಿ ಹೋಗಿದ್ದಾರೆ. ನಾವು ಜೈ ಶ್ರೀರಾಮ್ ಅನ್ನೋದು ಬೇಡ ಎಂದರೆ ಹೇಗೆ? ನಮ್ಮ ಮಕ್ಕಳು ಹೊರಗಡೆ ಓಡಾಡುವುದು ಬೇಡವೇ?? ನಮ್ಮ ಮಕ್ಕಳನ್ನು ಮನೆ ಒಳಗಿಟ್ಟುಕೊಂಡು ಊಟ ಹಾಕಬೇಕಾ ??ನನ್ನ ತಮ್ಮ ಹರ್ಷನನ್ನು ಬಲಿ ಪಡೆದದ್ದು ಸಾಲದೇ, ಇನ್ನೂ ಬಲಿಗಳು ಆಗಬೇಕಾ??ರಾಜಾರೋಷವಾಗಿ ಬಂದು ಧಮ್ಕಿ ಹಾಕುತ್ತಾರೆ ಅಂದರೆ ಹೇಗೆ?

ಹರ್ಷ ಹಂತಕರನ್ನು ಎನ್‌ಕೌಂಟರ್ ಮಾಡಿದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಮಗೆ ಭದ್ರತೆ ಕಲ್ಪಿಸಿ ಎಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ ಎಂದು ಅಶ್ವಿನಿ ಆಕ್ರೋಶ ಹೊರಹಾಕಿದ್ದಾರೆ.

ಹರ್ಷ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಬ್ಬರಿಗೆ ಜಾಮೀನು ಸಿಕ್ಕಿದ್ದು, ಇದರ ಬಳಿಕ ಈ ಘಟನೆ ನಡೆದಿದೆ. ಯಾವ ಭಯವಿಲ್ಲದೆ ರಾಜಾರೋಷವಾಗಿ ಎಗ್ಗಿಲ್ಲದೆ ಆರೋಪಿಗಳು ಅಪರಾಧ ಎಸಗುತ್ತಿದ್ದಾರೆ.

ನಾಳೆ ನನಗೆ ಬಂದು ಚಾಕು ಚುಚ್ಚಿ ಹೋಗಿ ಬಳಿಕ ಎಲ್ಲರೂ ನನ್ನ ತಾಯಿಗೆ ಸಾಂತ್ವನ ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮಗೆ ದೇವರಂತೆ ಈ ಪ್ರಕರಣವನ್ನು ಎನ್​ಐಎ ತನಿಖೆಗೆ ವಹಿಸಿ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಅಶ್ವಿನಿ ಹೇಳಿದ್ದಾರೆ.

ಸೀಗೆಹಟ್ಟಿ ತುಂಬಾ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಹೆಚ್ಚು ಬಂದೋಬಸ್ತ್ ಅಗತ್ಯವಿದೆ ಎಂಬ ಮುನ್ಸೂಚನೆಯನ್ನು ಕೂಡ ನೀಡಿದ್ದಾರೆ.

ಅನ್ಯಕೋಮಿನ ವ್ಯಕ್ತಿಗಳು ಮನೆಗೆ ಬಂದು ಜೀವ ಬೆದರಿಕೆ ಹಾಕಿದ ಬಗ್ಗೆ ಕೊಲೆಯಾದ ಹರ್ಷನ ತಾಯಿ ಪದ್ಮಾ, ವಿವರ ನೀಡಿದ್ದು , ರಾತ್ರಿ 11.15ರ ಸುಮಾರಿಗೆ ಬೈಕ್​ನಲ್ಲಿ ಬಂದು ಮಹಿಳೆಯರ ಮೇಲೆ ಹಲ್ಲೆ ಮಾಡಿ ಹರ್ಷಗೆ ಏನು ಮಾಡಿದ್ದೇವೋ ಅದನ್ನೇ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ನಮ್ಮ ಮನೆ ಬಳಿ ನಿಲ್ಲಿಸಿದ್ದ ಬೈಕ್​ಗೆ ದುಷ್ಕರ್ಮಿಗಳು ಒದ್ದು, ಭರಮಪ್ಪ ನಗರದಲ್ಲಿ ಯುವಕನೋರ್ವನಿಗೆ ಹಲ್ಲೆ ಮಾಡಿದ್ದಾರೆ. ಸೀಗೆಹಳ್ಳಿ ಅಷ್ಟೇ ಅಲ್ಲದೇ, ನಾಲ್ಕೈದು ಕಡೆಗಳಲ್ಲಿ ಗಲಾಟೆ ಮಾಡಿದ್ದು, ಹರ್ಷ ಕುಟುಂಬಕ್ಕೆ ಭಯ ಹುಟ್ಟು ಹಾಕಿದೆ.

ಹಾಗಾಗಿ, ಹರ್ಷರವರ ತಾಯಿ ಪೊಲೀಸರು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲು ಮನವಿ ಮಾಡಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕೆಂದು ಕೋರಿದ್ದಾರೆ.

ಮಗನನ್ನು ಕಳೆದುಕೊಂಡ ನೋವಿನ ಬೇಗುದಿಯಲ್ಲಿ ಹರ್ಷ ಮನೆಗೆ ವಾಪಸ್ ಬರುತ್ತಾನೆ ಎಂಬ ಆಶಾ ಭಾವನೆ ಹೊತ್ತು ಜೀವಿಸುತ್ತಾ ಇರುವಾಗಲೇ ಭಯದಲ್ಲಿ ದಿನದೂಡುವ ಸ್ಥಿತಿ ಎದುರಾಗಿದೆ. ಈ ನಡುವೆ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 10 ಜನರು ಸೇರಿ ಪಾಪಿಗಳಿಂದ ಒಬ್ಬರ ಮೇಲೆ ದಾಳಿ ನಡೆದಿದೆ.

ಇದರ ಬೆನ್ನಲ್ಲೆ ನಿನ್ನೆ ರಾತ್ರಿ ಎಸ್​ಪಿ ಬಂದು ಹೋಗಿದ್ದಾರೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿ ಸರಿಯಾಗಿ ಪೊಲೀಸರು ಕ್ರಮ ವಹಿಸಬೇಕು ಎಂದು ಹರ್ಷರವರ ತಾಯಿ ಮನವಿ ಮಾಡಿದ್ದಾರೆ.

Leave A Reply

Your email address will not be published.