ಮಂಗಳೂರು : ಸ್ಕೂಟರ್ ಗೆ ಡಿಕ್ಕಿ ಹೊಡೆದ ಬಸ್ | ಹಿಂಬದಿ ಸವಾರ ಬಾಲಕನ ಮೇಲೆ ಬಸ್ ಚಕ್ರ ಹರಿದು ಬಾಲಕ ಸಾವು

ಮಂಗಳೂರು: ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳ ಬಿದ್ದು ಬಸ್ ಚಕ್ರ ಹರಿದು ದಾರುಣವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನ (ಅ.17 ರಂದು) ಸಂಭವಿಸಿದೆ.

ನೀರುಮಾರ್ಗದ ಧನು(13) ಮೃತಪಟ್ಟ ಬಾಲಕ.

ಈತ ತನ್ನ ಸಂಬಂಧಿ ಜತೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಹೋಗುತ್ತಿದ್ದಾಗ ಖಾಸಗಿ ಸರ್ವಿಸ್ ಬಸ್ ಡಿಕ್ಕಿ ಹೊಡೆಯಿತು. ಪರಿಣಾಮ ಸವಾರ ಸ್ಕೂಟರ್ ನಿಂದ ಎಡ ಬದಿಗೆ ಬಿದ್ದರು. ಬಾಲಕ ಧನು ಬಲ ಬದಿಗೆ ಬಿದ್ದ. ಆದರೆ ಬಾಲಕನ ಮೇಲೆ ಬಸ್ ನ ಚಕ್ರ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

Leave A Reply

Your email address will not be published.