ಬರೋಬ್ಬರಿ 20 ದಿನಗಳ ಬಳಿಕ ಪತ್ತೆಯಾದರು ನಾಪತ್ತೆಯಾದ 3 ಬಾಲಕಿಯರು | ಈ ನಾಪತ್ತೆ ಪ್ರಕರಣದ ಹಿಂದಿದೆ ಮನ ಮಿಡಿಯುವ ಕಥೆ

ಬೆಂಗಳೂರಿನ ಸ್ಕೂಲ್ -ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾಥಿನಿಯರು ಇದೀಗ ಪತ್ತೆಯಾಗಿದ್ದಾರೆ. ಬರೋಬ್ಬರಿ 20 ದಿನಗಳ ಬಳಿಕ ಚೆನ್ನೈನಲ್ಲಿ ಇವರು ಪತ್ತೆಯಾಗಿದ್ದಾರೆ. ತಮಿಳುನಾಡು ಪೊಲೀಸರು ಬಾಲಕಿಯರನ್ನು ಬೆಂಗಳೂರಿಗೆ ಕರೆತಂದು ಪೋಷಕರ ಬಳಿಗೆ ಸೇರಿಸಿದ್ದಾರೆ.

ಈ ಮೂವರು ಬಾಲಕಿಯರ ಪೈಕಿ ಇಬ್ಬರು ಬಾಲಕಿಯರು ಪರಸ್ಪರ ಮದುವೆಯಾಗಲು ನಿರ್ಧಾರ ಮಾಡಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದು ಬಂದಿದೆ. ಇನ್ನೋರ್ವ ಬಾಲಕಿಗೆ ಆಕೆಯ ಮಲತಾಯಿಯ ಮಕ್ಕಳಿಂದ ಕೊಲೆ ಬೆದರಿಕೆ ಬಂದಿತ್ತು. ಇದಕ್ಕೆ ಪೂರಕವಾಗಿ ಜ್ಯೋತಿಷಿಯೊಬ್ಬ ನೀನು ಕೊಲೆ ಆಗುತ್ತೀಯಾ ಎಂದು ಹೇಳಿದ್ದ ಎಂಬುದಾಗಿ ತಿಳಿದು ಬಂದಿದೆ.

ಈ ಮೂವರು ವಿದ್ಯಾರ್ಥಿನಿಯರುಪೂರ್ವ ವಲಯದ ಖಾಸಗಿ ಶಾಲೆಯಲ್ಲಿ ಮೂವರು ವಿದ್ಯಾಥಿರ್ನಿಯರು 9 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೊಬ್ಬ ಬಾಲಕಿ ಮನೆಯಿಂದಲೇ ಶಾಲೆಗೆ ಬಂದು ಹೋಗುತ್ತಿದ್ದಳು. ಈ ಮೂವರಲ್ಲಿ ಒಬ್ಬಾಕೆಗೆ ತಂದೆ-ತಾಯಿ ಇರಲಿಲ್ಲ. 9ನೇ ತರಗತಿ ಓದುತ್ತಿದ್ದ ಮತ್ತೊರ್ವ ಬಾಲಕಿಗೆ ತಾಯಿ ಇರಲಿಲ್ಲ. ತಂದೆ ಇದ್ದು, ಆತ 2ನೇ ಮದುವೆಯಾಗಿದ್ದ. ತಂದೆ ತಾಯಿ ಜೊತೆ ನೆಲೆಸಿದ್ದ ಬಾಲಕಿಗೆ ತಾಯಿ ಪ್ರೀತಿ ತೋರಿಸಿದರೆ, ತಂದೆ ಮಾತ್ರ ಶಿಸ್ತಿನ ಜೀವನ ನಡೆಸುವಂತೆ ಒತ್ತಡ ಮಾಡುತ್ತಿದ್ದರು.

ಹಾಗಾಗಿ ಈ ಮೂವರು ವಿದ್ಯಾರ್ಥಿನಿಯರು ಒಂದಲ್ಲೊಂದು ಕಾರಣಕ್ಕೆ ಮಾನಸಿಕ ಹಿಂಸೆಗೆ ಒಳಗಾಗಿದ್ದು, ಕಷ್ಟಸುಖ ಮಾತಾಡಿಕೊಂಡು, ಸ್ನೇಹ ಬೆಳೆದು ಮನೆಯಿಂದ ದೂರ ಇರಲು ನಿರ್ಧಾರ ಮಾಡಿದ್ದರು. ಹಾಗಾಗಿ ಬಾಲಕಿಯರು ಒಂದು ದೃಢ ನಿರ್ಧಾರ ಮಾಡಿದ್ದಾರೆ. ಬಾಲಕಿಯರು ಮನೆಯಲ್ಲಿ ಕಷ್ಟವಿದೆ ಎಂದು ಸ್ನೇಹಿತೆಯರು ಮತ್ತು ಪರಿಚಯಸ್ಥರಿಂದ 30 ಸಾವಿರ ರೂ. ಸಂಗ್ರಹ ಮಾಡಿ, ಸೆ.6ರ ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಮತ್ತು ಸೆಕ್ಯೂರಿಟಿ ಕಣ್ತಪ್ಪಿಸಿ ಲಗೇಜ್ ಸಮೇತ ಪರಾರಿಯಾಗಿದ್ದರು.

ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿ ಕೂಡಿಕೊಂಡು ಆಟೋದಲ್ಲಿ ಫಾಲಸೇವಾನಗರಕ್ಕೆ ತೆರಳಿದ್ದರು. ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಕಂಟೋನ್ಮೆಂಟ್ ರೈಲು ನಿಲ್ದಾಣ ಮಾರ್ಗವಾಗಿ ವೆಲಾಂಗಣಿ ತೆರಳಲು ನಿರ್ಧರಿಸಿದ್ದರು. ಗೊತ್ತಾಗದೆ ಚೆನ್ನೈ ರೈಲು ಹತ್ತಿ ಸೆ.7ರಂದು ಇಳಿದಿದ್ದಾರೆ. ಚೆನ್ನೈ ರೈಲು ನಿಲ್ದಾಣದಲ್ಲಿ ಸಂಜೆವರೆಗೂ ಕಾಲ ಕಳೆದಿದ್ದಾರೆ.

ಆದರೆ ಈ ಬಾಲಕಿಯರು ಶಂಕಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡ ರೈಲ್ವೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಬಾಲಕಿಯರು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದಾಗ ಪೊಲೀಸರು ಬೆಂಗಳೂರು ರೈಲು ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಮತ್ತೊಂದೆಡೆ ಮಕ್ಕಳು ಕಾಣೆ ಆಗಿರುವುದಾಗಿ ಪಾಲಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ
ಪೊಲೀಸರು ಎಲ್ಲೆಡೆ ಹುಡುಕಾಟ ಶುರು ಮಾಡಿದ್ದರು.

ಆದರೆ ಇಲ್ಲೊಂದು ಅಚಾತುರ್ಯ ನಡೆದಿತ್ತು. ಬಾಲಕಿಯರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬಂದಾಗ ಪೊಲೀಸರು ಕಾಣೆಯಾಗಿರುವ ತಮ್ಮ ಭಾವಚಿತ್ರಗಳನ್ನು ಅಂಟಿಸಿದ್ದನ್ನು ಗಮನಿಸಿ, ವಾಪಸ್ ಚೆನ್ನೈಗೆ ತೆರಳಲು ನಿರ್ಧರಿಸಿ ಗೊತ್ತಾಗದೆ ದೆಹಲಿ ರೈಲಿಗೆ ಹತ್ತಿಸಿದ್ದಾರೆ. ಮಾರ್ಗಮಧ್ಯೆ ಮಾರ್ಗ ಬದಲಾಯಿಸಿ ಚೆನ್ನೈಗೆ ಹೋಗಿದ್ದಾರೆ. ಇಲ್ಲಿಯೂ ಈ ವಿದ್ಯಾರ್ಥಿನಿಯ ದುರಾದೃಷ್ಟ ಹಿಂಬಾಲಿಸುತ್ತಿತ್ತು, ಬಾಲಕಿಯರು ಬ್ಯಾಗ್‌ನಿಂದ ಹಣ ತೆಗೆಯುತ್ತಿದ್ದ ದೃಶ್ಯ ನೋಡಿದ ಕಳ್ಳರು, ಹಣ ಸಮೇತ ಬ್ಯಾಗ್ ಕಳವು ಮಾಡಿದ್ದರು.

ಚೆನ್ನೈನಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದ ಬಾಲಕಿಯರನ್ನು ಕರೆದು ಆಟೋ ಚಾಲಕ ಪ್ರಶ್ನಿಸಿದ್ದ. ಅದಕ್ಕೆ ತಮಿಳು ಬಲ್ಲ ವಿದ್ಯಾಥಿರ್ನಿಯರು ‘ಅನಾಥರು. ಹಾಸ್ಟೆಲ್‌ನಲ್ಲಿ ಹಿಂಸೆ ಕೊಡುತ್ತಿದ್ದರು. ಅದಕ್ಕೆ ಹೊರಗೆ ಬಂದಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದರು. ಆಟೋ ಚಾಲಕ, ಹೆಣ್ಣು ಮಕ್ಕಳನ್ನು ಚರ್ಚ್ ನಡೆಸುತ್ತಿದ್ದ ಅನಾಥಾಲಯಕ್ಕೆ ಸೇರಿಸಿ ಮಿಕ್ಸಿ ತಯಾರಿಸುವ ಘಟಕಕ್ಕೆ ಕೆಲಸಕ್ಕೆ ಸೇರಿಸಿದ್ದ.

ಮೂವರು ಬಾಲಕಿಯರು ಒಂದು ಮೊಬೈಲ್ ಫೋನ್ ಖರೀದಿ ಮಾಡಿಕೊಂಡಿದ್ದರು. ಒಂದು ದಿನ ಒಬ್ಬಾಕೆ ಆಕೆಯ ತಂದೆಗೆ ಮಿಸ್ ಕಾಲ್ ಕೊಟ್ಟಿದ್ದಳು. ಆದರೆ ತಂದೆ ವಾಪಾಸು ಕರೆ ಮಾಡಿದಾಗ ಸ್ವೀಕರಿಸುತ್ತಿರಲಿಲ್ಲ. ಅನುಮಾನ ಬಂದು ಈ ವಿಷಯವನ್ನು ಪಾಲಕರು, ಪೊಲೀಸರಿಗೆ ತಿಳಿಸಿದ್ದರು. ಕರೆಯ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತಂದಿದ್ದಾರೆ.

ಹೆತ್ತವರ ಪ್ರೀತಿಯಿಂದ ವಂಚಿತರಾಗಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪರಸ್ಪರ ಮದುವೆ ಆಗಲು ನಿರ್ಧರಿಸಿದ್ದರು. ಅಲ್ಲದೆ, ಬಡ ಹೆಣ್ಣು ಮಕ್ಕಳನ್ನು ಯಾರು ಪ್ರೀತಿಸುತ್ತಾರೆ? ಯಾರು ಮದುವೆ ಮಾಡುತ್ತಾರೆ? ಎಂದು ಮಾನಸಿಕವಾಗಿ ಕುಗ್ಗಿದ್ದರು. ಅದಕ್ಕಾಗಿ ಒಬ್ಬಾಕೆ, ಹುಡುಗನಂತೆ ಕೂದಲು ಕಟಿಂಗ್ ಮಾಡಿಸಿಕೊಂಡು ಪುರುಷರ ಉಡುಪು ಧರಿಸಿಕೊಳ್ಳುತ್ತಿದ್ದಳು. ಮತ್ತೋರ್ವ ಬಾಲಕಿ, ಆಕೆಯ ಪತ್ನಿಯ ರೀತಿ ನಡೆದುಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.

Leave A Reply

Your email address will not be published.