ನನ್ನೂರಲ್ಲಿಯೇ ಗುರು ಶಿಷ್ಯರು ಪ್ರಚಾರ ಮಾಡಿದ ಹೆಮ್ಮೆ;
ಪಿಟಿ ಮಾಸ್ಟರ್ ಶರಣ್

ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು.

ಗುರು ಶಿಷ್ಯರು ಸಿನಿಮಾ ಖೋ ಖೋ ಆಧರಿಸಿದ ಕ್ರೀಡೆಯ ಸಿನಿಮಾ. ಇಲ್ಲಿ ಖೋ ಖೋ ಅಷ್ಟೇ ಅಲ್ಲ, ಗುರು ಮತ್ತು ಶಿಷ್ಯರ ನಡುವಿನ ಸಂಬಂಧದ ಕಥೆಯನ್ನೂ ಹೇಳುತ್ತಿದೆ. ಈ ಚಿತ್ರದ ಬಗ್ಗೆ ಶರಣ್ ಅವರಿಗೆ ವಿಶೇಷ ಪ್ರೀತಿ ಕೂಡ ಇದೆ. ಇಲ್ಲಿವರೆಗೂ ಇದ್ದ ಶರಣ್ ರೋಲ್ ಅನ್ನ ಇಲ್ಲಿ ನೀವೂ ಕಾಣೋದಿಲ್ಲ. ಮೋಹನ್ ಹೆಸರಿನ ಒಬ್ಬ ಪಿಟಿ ಮಾಸ್ತರ್​ ಅನ್ನ ನೀವೂ ನೋಡಬಹುದು.

ನಿಮಗೆ ಹುಬ್ಬಳ್ಳಿ ಬಗ್ಗೆ ವಿಶೇಷವಾದ ಅಟ್ಯಾಚ್ ಮೆಂಟ್ ಇದೆ ಅಲ್ವೇ?
ಶರಣ್: ಹುಬ್ಬಳ್ಳಿ ನಾನು ಹುಟ್ಟಿದ ಊರು. ಇಲ್ಲಿ ನಾನು ಓಡಾಡಿದ್ದೇನೆ. ನಮ್ಮ ತಂದೆಯ ನಾಟಕ ಕಂಪನಿ ಇಲ್ಲಿಯೇ ಇತ್ತು. ಇಲ್ಲಿ ನನ್ನ ಚಿತ್ರ ಪ್ರಚಾರ ಮಾಡೋದೇ ಒಂದು ಖುಷಿ.

ಹುಬ್ಬಳ್ಳಿ ಮಂದಿ ಮತ್ತು ಹುಬ್ಬಳ್ಳಿ ಊಟದ ಬಗ್ಗೆ ಹೇಗಿದೆ ಆ ನೆನಪುಗಳು?
ಶರಣ್: ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು.

ಗುರು ಶಿಷ್ಯರು ಸಿನಿಮಾದಲ್ಲಿ ನೀವು ಪಿಟಿ ಮಾಸ್ಟರ್, ರಿಯಲ್ ಆಗಿ ಪಿಟಿ ಮಾಸ್ತರನ್ನ ಕಾಡಿದ್ದು ಇದಿಯೇ?
ಶರಣ್: ಶಾಲೆಗಳಲ್ಲಿ ನಾನು ಪಿಟಿ ಮಾಸ್ತರ್​ ರನ್ನ ಕಾಡಿಲ್ಲ ಬಿಡ್ರಿ, ನಾನು ಅಂತ ಹುಡುಗ ಅಲ್ಲ. ಶಾಲ್ಯಾಗ್ ಹಿಂದಿನ ಬೆಂಚ್​ ನ್ಯಾಗ ಕುಂತ ಮಜಾ ಮಾಡ್ತಿದ್ವಿ ಅಷ್ಟೆ.

ನಿಮ್ಮ ಲೈಫ್​ ಅಲ್ಲಿ ನಿಮಗೆ ರಿಯಲ್ ಗುರುಗಳು ಯಾರು?
ಶರಣ್: ನಾನು 100ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅದರ ನಿರ್ದೇಶಕರೆಲ್ಲ ನನ್ನ ಗುರುಗಳೇ ಆಗಿದ್ದಾರೆ. ಕೆಲಸ ಕೊಟ್ಟು ಕೆಲಸ ಕಲಿಸಿದ್ದಾರೆ. ಅವರೆಲ್ಲ ನನ್ನ ವಿಶೇಷ ಗುರುಗಳೇ ಅಲ್ವೆ ?

ಗುರು ಶಿಷ್ಯರು ಸಿನಿಮಾವನ್ನ ಪ್ರೇಕ್ಷಕರು ಥಿಯೇಟರ್​ಗೆ ಬಂದು ಯಾಕ್ ನೋಡಬೇಕು?
ಶರಣ್: ಗುರು ಶಿಷ್ಯರು ಇದೇ ತಿಂಗಳ 23 ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರ ನೋಡೋಕೆ ಬರೋ ಪ್ರೇಕ್ಷಕರಿಗೆ ಮೋಸ ಆಗೋದಿಲ್ಲ. ಒಂದ್ ಒಳ್ಳೆ ಚಿತ್ರ ವೀಕ್ಷಿಸಿದ ಖುಷಿ ಅವರದ್ದಾಗುತ್ತದೆ. ಥಿಯೇಟರ್​ಗೆ ಬನ್ನಿ, ಸಿನಿಮಾ ನೋಡಿ.

ಗುರು ಶಿಷ್ಯರ ಮೂಲಕ ತಮ್ಮ ಪುತ್ರ ಹೃದಯ ಸೇರಿದಂತೆ ಇನ್ನು ಹಲವು ಯುವಕರಿಗೆ ಶರಣ್ ಮತ್ತು ತರುಣ್ ಒಳ್ಳೆ ವೇದಿಕೆ ಮಾಡಿಕೊಟ್ಟಿದ್ದು, ನಿರ್ದೇಶಕ ಜಡೇಶ್ ಹಂಪಿ ಕೂಡ ಈ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಅನ್ನೇ ತಂದಿದ್ದಾರೆ. ಅಜನೀಶ್ ಲೋಕನಾಥ್ ಹಾಡುಗಳು ಈಗಾಗಲೇ ಮೋಡಿ ಮಾಡ್ತಾನೇ ಇವೆ.

Leave A Reply

Your email address will not be published.