ಉಡುಪಿ : ಪೇಜಾವರ ಮಠಾಧೀಶರಿಂದ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮೊದಲು ರಥಯಾತ್ರೆ !!!

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರನ್ನು ಆಕರ್ಷಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಹಾಗೂ ರಾಮಜನ್ಮಭೂಮಿ ಟ್ರಸ್ಟ್ ನ ಸದಸ್ಯ ಸ್ವಾಮಿ ವಿಶ್ವಪ್ರಸನ್ನ ತೀರ್ಥರು (Swami Vishwaprasanna Teertha) ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ರಥಯಾತ್ರೆ ( Rath Yatra) ನಡೆಸುವ ಬಗ್ಗೆ ಹೇಳಿದ್ದಾರೆ.

ಈ ಬಗ್ಗೆ ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ದೇಶದ ನಾಗರಿಕರನ್ನು ಆಕರ್ಷಿಸುವುದು ಯಾತ್ರೆಯ ಮೂಲ ಉದ್ದೇಶವಾಗಿದೆ. ಹಾಗೇನೇ ಅಯೋಧ್ಯೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರು ಅನೇಕರಿದ್ದಾರೆ. ಹಾಗಾಗಿ ಅವರನ್ನೂ ನೆನಪಿಸಿಕೊಳ್ಳಬೇಕು ಈ ಯಾತ್ರೆಯ ಸಂದರ್ಭದಲ್ಲಿ ಎಂದು ಹೇಳಿದ್ದಾರೆ‌.

ಶ್ರೀರಾಮನ ವಿಗ್ರಹ ಮತ್ತು ಹಿರಿಯ ರಾಮನ ವಿಗ್ರಹವನ್ನು ಸ್ಥಾಪಿಸಬೇಕೆ ಅಥವಾ ಯುವ ರಾಮನ (ಬಾಲರಾಮ) ಮೂರ್ತಿಯನ್ನು ಪ್ರತಿಷ್ಠಾಪಿಸುವ ಕುರಿತು ಚರ್ಚೆ ಮಾಡಲಾಯಿತು. ಆದರೆ ಅಯೋಧ್ಯೆಯು ಯುಗಗಳಿಂದಲೂ ಕಿರಿಯ ರಾಮನ ಪವಿತ್ರ ಸ್ಥಳವಾಗಿದ್ದರಿಂದ, ಯುವ ರಾಮನ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು. ಎತ್ತರದ ವಿಗ್ರಹವನ್ನು ಸಂಪೂರ್ಣವಾಗಿ ನೋಡಲಾಗದ ಕಾರಣ ಭಕ್ತರಿಗೆ ಕಾಣಿಸುವಂತೆ ವಿಗ್ರಹದ ಗಾತ್ರ ಇರುತ್ತದೆ ಎಂದಿದ್ದಾರೆ ಮಠಾಧೀಶರು.

ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ ದೇಣಿಗೆ ಬರುತ್ತಿದೆ. ಆರಂಭದಲ್ಲಿ 400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ ಹಣದುಬ್ಬರದಿಂದಾಗಿ ಈಗ ಜಾಸ್ತಿ ಆಗಿದೆ. ಹಾಗಾಗಿ ನಿರ್ಮಾಣ ವೆಚ್ಚ 1,300 ಕೋಟಿಯಷ್ಟಾಗುತ್ತದೆ ಎಂದು ಸ್ವಾಮೀಜಿ ಮಾತನಾಡುತ್ತಾ ಹೇಳಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೇ, ರಾಮಾಯಣದಲ್ಲಿ ಹನುಮಂತನ ಪಾತ್ರ ಅತ್ಯಂತ ಅಮೂಲ್ಯ.ಅಷ್ಟು ಮಾತ್ರವಲ್ಲದೇ ಹನುಮಂತನ ನಾಡು ಕರ್ನಾಟಕಕ್ಕೂ ರಾಮಮಂದಿರಕ್ಕೂ ಅನ್ಯೋನ್ಯ ಸಂಬಂಧವಿದೆ ಅವರು ನಿಜಕ್ಕೂ ಇದೊಂದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಹಾಗಾಗಿ ರಾಜ್ಯದಿಂದ ರಾಮಮಂದಿರಕ್ಕೆ ‘ಸ್ವರ್ಣ ಶಿಖರ’ (ಚಿನ್ನದ ಶಿಖರ) ನೀಡಲಾಗುವುದು. ರಾಮ ಜನ್ಮಭೂಮಿ ಟ್ರಸ್ಟ್ 2024 ರಲ್ಲಿ ಮಕರ ಸಂಕ್ರಾಂತಿಯಂದು ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಸ್ವಾಮಿ ಹೇಳಿದರು.

Leave A Reply

Your email address will not be published.