BREAKING NEWS : ಕಾಲುವೆಗೆ ಬಿದ್ದ ಆಟೋ : 10ಕ್ಕೂ ಹೆಚ್ಚು ಜನರು ನೀರುಪಾಲು, ಮೂವರ ಶವ ಹೊರಕ್ಕೆ

ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ 10 ಜನ ನೀರು ಪಾಲಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಗ್ರಾಮ ಹೊರವಲಯದಲ್ಲಿ ಈ ಅವಘಡ ನಡೆದಿದೆ. ಜನರನ್ನು ತುಂಬಿಕೊಂಡು ಹೊರಟಿದ್ದ ಆಟೋ ಕಾಲುವೆಗೆ ಉರುಳಿ ಬಿದ್ದು,10ಕ್ಕೂ ಹೆಚ್ಚು ಜನರು ನೀರುಪಾಲಾಗಿದ್ದಾರೆ. ಈಗ ಕೇವಲ ಮೂವರ ಶವ ಹೊರಕ್ಕೆ ತೆಗೆಯಲಾಗಿದೆ.

ಉಳಿದ 7 ಜನ ಕಣ್ಮರೆ ಆಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply

Your email address will not be published.