ಕ್ಯಾನ್ಸರ್ ನಿಂದ ಮನನೊಂದ ವ್ಯಕ್ತಿ ಪತ್ನಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ!

ಬೆಂಗಳೂರು: ಕ್ಯಾನ್ಸರ್‌ನಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹೇಶ್‌ ಹಾಗೂ ಅವರ ಕುಟುಂಬ ಆತ್ಮಹತ್ಯೆಗೆ ಶರಣಾದವರು.

ಮಹೇಶ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದರಿಂದ ನೊಂದ ಅವರು, ನನಗೆ ಹೆಚ್ಚು ಕಮ್ಮಿ ಆದ್ರೆ ಮುಂದೆ ಯಾರು ಮನೆಯವರನ್ನು ನೋಡಿಕೊಳ್ಳುತ್ತಾರೆ ಎಂದು ಅಲೋಚಿಸಿದ್ದಾರೆ. ಬಳಿಕ ಇಂದು ಬೆಳಗ್ಗೆ ತಮ್ಮ ಹೆಂಡತಿ ಹಾಗೂ ಮಗನನ್ನು ಕೊಲೆ ಮಾಡಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಗೆ ಮೂವರ ಶವವನ್ನು ಕಳುಹಿಸಿದ್ದು, ಸ್ಥಳಕ್ಕೆ ಕೋಣಕುಂಟೆ ಪೋಲಿಸರು ಆಗಮಿಸಿದ್ದಾರೆ. ಕೊಲೆಯ ಮಾಹಿತಿ ಸಂಪೂರ್ಣ ತನಿಖೆ ಬಳಿಕ ತಿಳಿದು ಬರಲಿದೆ.

Leave A Reply

Your email address will not be published.