ಕಾಲೇಜು ಫೆಸ್ಟ್ ನಲ್ಲಿ ವೈಷಮ್ಯ!! ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ-ಓರ್ವನ ಕೊಲೆ!!

ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ವಿದ್ಯಾರ್ಥಿ ಕೊಲೆಯಾದ ಘಟನೆಯೊಂದು ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜಿನಲ್ಲಿ ನಡೆದಿದೆ.

ಮೃತನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್(18) ಎಂದು ಗುರುತಿಸಲಾಗಿದೆ.

ಕಳೆದ ಗುರುವಾರ ಕಾಲೇಜಿನಲ್ಲಿ ನಡೆದ ಫೆಸ್ಟ್ ವೇಳೆ ಮೃತ ವಿದ್ಯಾರ್ಥಿ ಅರ್ಬಾಜ್ ಹಲವು ವಿದ್ಯಾರ್ಥಿಗಳೊಂದಿಗೆ ಗಲಾಟೆ ನಡೆಸಿಕೊಂಡಿದ್ದು, ಇದೇ ಹಗೆ ತೀರಿಸಲು ಅಲ್ಲೊಂದು ತಂಡ ಆತನಿಗಾಗಿ ಕಾದು ಕುಳಿತಿತ್ತು.

ಮಧ್ಯಾಹ್ನ ನಮಾಜ್ ಮುಗಿಸಿ ಕಾಲೇಜಿಗೆ ಬರುತ್ತಿದ್ದ ಅರ್ಬಾಜ್ ನನ್ನು ಕಾಲೇಜಿನಿಂದ ಹೊರಗೆ ಕರೆದು ಚೂರಿ ಇರಿಯಲಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದು, ವೈಷಮ್ಯಕ್ಕೆ ಕೊಲೆ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave A Reply

Your email address will not be published.