ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಳೆ ವರ್ಗಾವಣೆ!! ಪುತ್ತೂರು ಎಸ್ಐ ರಾಜೇಶ್ ಕೆ.ವಿ ಉಪ್ಪಿನಂಗಡಿ ಠಾಣೆಗೆ

ಪುತ್ತೂರು: ಉಪ್ಪಿನಂಗಡಿ, ಕಡಬ ಮತ್ತು ಪುತ್ತೂರು ನಗರ ಪೋಲಿಸ್ ಠಾಣೆಯ ಎಸ್.ಐ ಗಳನ್ನು ದಿಢೀರ್ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರಾದ ದಿವ್ಯಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.

ಉಪ್ಪಿನಂಗಡಿ ಪೋಲಿಸ್ ಠಾಣೆಯ ಎಸ್ಐ ಕುಮಾರ್ ಕಾಂಬ್ಳೆಯವರನ್ನು ವರ್ಗಾವಣೆ ಮಾಡಿ, ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಕೆ.ವಿ. ರವರನ್ನು ಉಪ್ಪಿನಂಗಡಿಯ ನೂತನ ಠಾಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಹಾಗೆಯೇ ಪುತ್ತೂರು ನಗರ ಠಾಣೆಗೆ ಕಡಬ ಠಾಣೆಯ ಎಸ್.ಐ. ಶ್ರೀಕಾಂತ್ ರಾಥೋಡ್ ರವರನ್ನು ವರ್ಗಾವಣೆ ಮಾಡಲಾಗಿದೆ.

Leave A Reply

Your email address will not be published.