ತನ್ನ ಕೋಳಿ ಕೊಂದ ದ್ವೇಷಕ್ಕೆ ಬಸ್ಸನ್ನೇ ಎತ್ತಾಕೊಂಡೋದ ಕಾನ್ಸ್ಟೇಬಲ್!

ಕೋಳಿಯನ್ನು ಕೊಂದ ಕೋಪಕ್ಕೆ ಕಾನ್ಸ್ ಟೇಬಲ್ ಓರ್ವರು ವ್ಯಕ್ತಿಯೊಬ್ಬನ ಬಸ್ ಅನ್ನೇ ಎತ್ತಾಕೊಂಡೋದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಕದಿರೇಶನ್ ಎನ್ನುವವರು ಥೇಣಿ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿರುವವರಾಗಿದ್ದು, ಇವರು ಥೇಣಿ ಜಿಲ್ಲೆಯ ಅಂಟಿಪಟ್ಟಿ ಬಳಿಯ ಡಿ.ಪೊಮ್ಮಿನಾಯಕನ ಪಟ್ಟಿಯವರು. ಇವರು ಕುಟುಂಬ ಸಮೇತ ಕಾರಿನಲ್ಲಿ ತೇಣಿಗೆ ತೆರಳಿದ್ದರು. ಆ ಸಮಯದಲ್ಲಿ ಆಂಡಿಪಟ್ಟಿ ಬಳಿ ಟಿ.ಸುಪ್ಪುಲಾಪುರಂ ವಿಭಾಗದಲ್ಲಿ ಮಧುರೈ ಕಡೆಯಿಂದ ಕಂಬಂ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಕದಿರೇಶನ್ ಅವರ ಕಾರಿನ ಹಿಂಬದಿಗೆ ಅನಿರೀಕ್ಷಿತವಾಗಿ ಡಿಕ್ಕಿ ಹೊಡೆದು ಕಾರಿನ ಹಿಂಬದಿ ಭಾಗ ಜಖಂಗೊಂಡಿತ್ತು.

ಘಟನೆಯಿಂದ ಕೋಪಗೊಂಡ ಕದಿರೇಶನ್, ಕಾರಿನಿಂದ ಕೆಳಗಿಳಿದು ಬಸ್ ಚಾಲಕ ಮತ್ತು ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ್ದಾರೆ. ಸ್ವಲ್ಪ ಸಮಯದ ನಂತರ, ಅವರು ತನ್ನ ಕೆಲವು ಗ್ರಾಮಸ್ಥರೊಂದಿಗೆ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ, ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ತನ್ನ ಊರಿಗೆ ಬಸ್ ತೆಗೆದುಕೊಂಡು ಹೋಗಿದ್ದಾರೆ.ಬಳಿಕ, ಖಾಸಗಿ ಬಸ್ ಚಾಲಕ ಅಕ್ಕೂರರಾಜ ಆಂಡಿಪಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ಆಧರಿಸಿ ಡಿ.ಪೊಮ್ಮಿನಾಯಕನಪಟ್ಟಿಗೆ ತೆರಳಿದ ಪೊಲೀಸರು, ಖಾಸಗಿ ಬಸ್ ನ್ನು ವಶಪಡಿಸಿಕೊಂಡು ಆಂಡಿಪಟ್ಟಿ ಠಾಣೆಗೆ ಕೊಂಡೊಯ್ದಿದ್ದಾರೆ. ಅಲ್ಲದೆ, ಕದಿರೇಶನ್ ಅವರ ಇನ್ನೋವಾ ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ.

ನಂತರ ಚಾಲಕ ಬಸ್ಸನ್ನು ಪರಿಶೀಲಿಸಿದಾಗ ಅದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿರುವುದು, ಹಾರ್ಡ್ ಡಿಸ್ಕ್, ಉಬರ್ ಧ್ವನಿವರ್ಧಕ ಮತ್ತು ಟಿವಿ ಹಾಳಾಗಿರುವುದು ಕಂಡು ಬಂದಿದೆ. ಅಲ್ಲದೆ, ವಸ್ತುಗಳು ಕಳ್ಳತನವಾಗಿರುವುದು ತಿಳಿದು ಬಂದಿದೆ. ಬಸ್ ಚಾಲಕ ನೀಡಿದ ದೂರಿನ ಮೇರೆಗೆ ಅಂಟಿಪಟ್ಟಿ ಪೊಲೀಸರು ಸಶಸ್ತ್ರ ಪಡೆ ಕಾನ್‌ಸ್ಟೆಬಲ್ ಕತಿರೇಸನ್ ಮತ್ತು ಇತರ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತನಿಖೆಯ ಬಳಿಕ ಇವರ ನಡುವಿನ ಜಗಳಕ್ಕೆ ಕೋಳಿಯ ಸಾವೇ ಕಾರಣ ಎಂದು ತಿಳಿದುಬಂದಿದೆ. ಹೌದು. ಆಂಡಿಪಟ್ಟಿ-ಮಧುರೈ ರಸ್ತೆಯಲ್ಲಿ ಸಶಸ್ತ್ರ ಪಡೆಯ ಕಾನ್‌ಸ್ಟೆಬಲ್ ಆಗಿರುವ ಕತಿರೇಸನ್ ಕೋಳಿ ಫಾರಂ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮೇ 10ರಂದು ಅದೇ ಖಾಸಗಿ ಕಂಪನಿಗೆ ಸೇರಿದ ಬಸ್ ಮಧುರೈನಿಂದ ಆಂಡಿಪಟ್ಟಿಗೆ ಬರುತ್ತಿದ್ದಾಗ ಅನಿರೀಕ್ಷಿತ ಅಪಘಾತದಲ್ಲಿ ನಿಯಂತ್ರಣ ತಪ್ಪಿ ಕತಿರೇಸನ್ ಅವರ ಕೋಳಿ ಫಾರಂಗೆ ಪ್ರವೇಶಿಸಿತ್ತು.

ಇದರಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಫಾರಂನಲ್ಲಿದ್ದ 50 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು. ಅದಕ್ಕಾಗಿ ಅಪಘಾತದ ಪರಿಹಾರವಾಗಿ 1.50 ಲಕ್ಷ ರೂಪಾಯಿ ನೀಡಲು ಬಸ್ ಕಂಪನಿ ನಿರಾಕರಿಸಿದಾಗ ಕೋಪದಿಂದ ಈ ರೀತಿ ಮಾಡಿದ್ದೇನೆ ಎಂದು ಕದಿರೇಶನ್ ಹೇಳಿದ್ದಾರೆ. ಇದಾದ ನಂತರ ಆಂಟಿಪಟ್ಟಿ ಪೊಲೀಸರು ಕದಿರೇಶನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜೈಲಿಗಟ್ಟಿದ್ದಾರೆ. ಹಾಗೂ ಇವರ ವಿರುದ್ಧ ಇಲಾಖಾ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸರು ಆದೇಶಿಸಿದ್ದಾರೆ. ಈ ನಡುವೆ ಕತಿರೇಶನ ಪತ್ನಿ ನೀಡಿದ ದೂರಿನ ಮೇರೆಗೆ ಅಂಟಿಪಟ್ಟಿ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.