ಮೀನು ಹಿಡಿಯಲು ಹೋದ ಮಕ್ಕಳಿಗೆ ಪತ್ತೆಯಾಯಿತು “ರಾಮ್” ಎಂದು ಬರೆದಿರುವ ಕಲ್ಲು | ರಾಮಭಕ್ತರ ಹರ್ಷೋದ್ಗಾರ

ರಾಮಭಕ್ತರಿಗೆ ಒಂದು ಸಿಹಿಸುದ್ದಿ. ಹೌದು, ಉತ್ತರ ಪ್ರದೇಶದಲ್ಲಿ ‘ ರಾಮಸೇತು’ ಎಂದು ಬರೆದಿರುವ ಕಲ್ಲೊಂದು ದೊರಕಿದೆ. ಹೌದು, ಉತ್ತರ ಪ್ರದೇಶದ ಇಸಾನ್ ನದಿಯ ನೀರಿನಲ್ಲಿ ತೇಲುತ್ತಿರುವ ಈ ಕಲ್ಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕಲ್ಲು ‘ರಾಮಸೇತು’ ಕಲ್ಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಯುಪಿಯ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲಿ ಬಂದಿದೆ. ಇದರಲ್ಲಿ ಕಲ್ಲಿನ ಮೇಲೆ ಹಿಂದಿ ಭಾಷೆಯಲ್ಲಿ ‘ರಾಮ್’ ಎಂದು ಬರೆಯಲಾಗಿದೆ. ಸ್ಥಳೀಯರ ಪ್ರಕಾರ ಈ ಕಲ್ಲು ಖಡಾಖಂಡಿತವಾಗಿ ಶ್ರೀರಾಮನಿಂದ ನಿರ್ಮಿಸಿದ್ದು ಹಾಗೂ ಇದು ‘ರಾಮಸೇತುವಿನ ಕಲ್ಲು’ ಎಂದು ದೃಢವಾಗಿ ನಂಬಿಕೆಯಿಂದ ಹೇಳುತ್ತಿದ್ದಾರೆ.

ಮೀನು ಹಿಡಿಯಲೆಂದು ನದಿಗೆ ತೆರಳಿದ್ದ ಮಕ್ಕಳಿಗೆ ಈ ಕಲ್ಲು ದೊರಕಿದೆ. ಹಿಂದಿಯಲ್ಲಿ ‘ರಾಮ್’ ಎಂದು ಬರೆದಿರುವ ಈ ಕಲ್ಲು ಸಿಕ್ಕಿದೆ. ಈ ಕಲ್ಲು ಬರೋಬ್ಬರಿ 5.7 ಕೆಜಿ ತೂಕವಿದ್ದರೂ ನೀರಿನಲ್ಲಿ ತೇಲುತ್ತಿರುವುದು ನಿಜಕ್ಕೂ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ರಾಮ ಸೀತಾದೇವಿಯನ್ನು ಹುಡುಕುತ್ತಾ ಶ್ರೀಲಂಕಾವನ್ನು ತಲುಪಲು ನೀರಿನ ಮೇಲೆ ತೇಲುತ್ತಿರುವ ಕಲ್ಲುಗಳಿಂದ ರಾಮಸೇತುವನ್ನು ವಾನರಸೇನನ ಸಹಾಯದಿಂದ ನಿರ್ಮಿಸಿದನು ಎಂದು ಹಿಂದೂಗಳು ನಂಬುತ್ತಾರೆ. ಈ ಘಟನೆಗೆ ಸಾಕ್ಷಿ ಇದೀಗ ನದಿ ನೀರಿನಲ್ಲಿ ತೇಲುತ್ತಿರುವ ಕಲ್ಲು ಎನ್ನಲಾಗುತ್ತಿದೆ. ಇದು ರಾಮನ ಕಲ್ಲೇ ಎಂದು ದೃಢವಾಗಿ ನಂಬಿರುವ ಅಲ್ಲಿನ ಸ್ಥಳೀಯ ಜನ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಲ್ಲಿಗೆ ಪೂಜೆ ಮಾಡುತ್ತಿದ್ದಾರೆ.

Leave A Reply

Your email address will not be published.