ಅಗ್ನಿವೀರ್ ಸೇನೆಗೆ ಸೇರ ಬಯಸಿದಾಕೆ ಪರೀಕ್ಷೆ ತಯಾರಿ ವೇಳೆ ಸಾವು!

ಅಗ್ನಿವೀರ್​​ ನೇಮಕಾತಿಗಾಗಿ ಅದೆಷ್ಟೋ ಅಭ್ಯರ್ಥಿಗಳು ಸತತ ಪ್ರಯತ್ನ ಪಡುತ್ತಲೇ ಇದ್ದಾರೆ. ಇದೇ ರೀತಿ ಅಗ್ನಿವೀರ್​​​ ದೈಹಿಕ ಪರೀಕ್ಷೆಗೋಸ್ಕರ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಓಡುತ್ತಿದ್ದಾಗ ಹಠಾತ್​ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಲಾಲ್​ಪುರ ಗ್ರಾಮದ ಸುರೇಶ್ ಚೌಹಾಣ್ ಅವರ ಪುತ್ರಿ ಶ್ವೇತಾ ಚೌಹಾಣ್​(19) ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಅಗ್ನಿಪಥ್​ ಯೋಜನೆಯಡಿ ನಡೆಯುತ್ತಿದ್ದ ನೇಮಕಾತಿಗೋಸ್ಕರ ಆಕೆ ತಯಾರಿ ನಡೆಸಿದ್ದಳು. ಉತ್ತರ ಪ್ರದೇಶದ ಮೈನ್​​ಪುರಿಯಲ್ಲಿ ಅಭ್ಯಾಸಕ್ಕಾಗಿ ಓಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಈ ವೇಳೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಮೈನ್​​ಪುರಿ ಜಿಲ್ಲೆಯ ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 12ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಈಕೆ ಸೇನೆಗೆ ಸೇರಬೇಕೆಂದು ಕನಸು ಕಾಣುತ್ತಿದ್ದಳೆಂದು ಪೋಷಕರು ತಿಳಿಸಿದ್ದು, ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.