ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀಯ ನಗ್ನ ವೀಡಿಯೋ ವೈರಲ್ ಹಿಂದೆ ಮುಂದೆ ಮತ್ತು ಒಳಗೆ !! ಇಲ್ಲಿದೆ ಫುಲ್ ಸ್ಟೋರಿ !

ಬೆಳಗಾವಿ: ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ಕೇಸ್ ದಾಖಲಾಗಿರುವ ವಿಚಾರ ಇದೀಗ ಎಲ್ಲರಿಗೂ ಗೊತ್ತು. ಈಗ ಈ ಸಂಬಂಧ ನವ್ಯಶ್ರೀ ರಾವ್ ಆಡಿಯೋ ರಿಲೀಸ್ ಮಾಡಿದ್ದಾಳೆ. ತನ್ನ ಮೇಲಿನ ಎಲ್ಲಾ ಆರೋಪಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾಳೆ.

ಘಟನೆಯ ಪೂರ್ತಿ ವಿವರ:
ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬ ಪೊಲೀಸ್ರಿಗೆ ಕಂಪ್ಲೇಂಟು ನೀಡಿದ್ದ. ಅದರಂತೆ ಪೊಲೀಸರು ನವ್ಯಶ್ರೀ ರಾವ್ ಮೇಲೆ ಎಫ್ ಐ ಆರ್ ದಾಖಲಿಸಿದ್ದರು. ಇದೀಗ ಈ ಪ್ರಕರಣ ವಿಚಿತ್ರ ತಿರುವು ತೆಗೆದುಕೊಳ್ಳುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳುವ ಮುನ್ನ ಕಳೆದ ಒಂದು ವಾರದಲ್ಲಿ ಏನೇನಾಯಿತು ಎಂದು ಒಂದು ಸುತ್ತು ಹಾಕಿ ಬರುವುದು ಉತ್ತಮ.

ಮೊನ್ನೆ, ಕೆಲ ದಿನಗಳ ಹಿಂದೆ ಕೆಲವು ಗ್ರೂಪುಗಳಲ್ಲಿ ಒಂದಿಷ್ಟು ಫೋಟೋಗಳು ಮತ್ತು ನಗ್ನ ಚಿತ್ರಗಳು ವಿಡಿಯೋಗಳು ವಾಟ್ಸಾಪ್ ಗ್ರೂಪ್ಗಳಲ್ಲಿ ಕೈ ಬದಲಾಗುತ್ತಿದ್ದವು. ಫೋಟೋದಲ್ಲಿರುವ ಸುಂದರವಾಗಿ ಅಲಂಕೃತಗೊಂಡ ಹೆಚ್ಚು ಕಮ್ಮಿ ಸಿನಿಮಾ ಹೀರೋಯಿನ್ ಥರ ಇರುವ ಹುಡುಗಿ ಒಬ್ಬಳು, ಬಟ್ಟೆ ಕಳೆಸಿದ ಸ್ಥಿತಿಯಲ್ಲಿ ಸ್ನಾನದ ಮನೆಯಲ್ಲಿ ನುಲಿಯುವ ವಿಡಿಯೋಗಳು ವೈರಲ್ ಆಗಿದ್ದವು. ಆಕೆ ಕಾಂಗ್ರೆಸ್ ಕಾರ್ಯಕರ್ತೆ. ಅಲ್ಲದೆ ಆಕೆ ತನ್ನದೇ ಹೆಸರಿನಲ್ಲಿ ‘ನವ್ಯ ಫೌಂಡೇಶನ್ ‘ ಅಂತ ಎನ್‌ಜಿಒ ಒಂದನ್ನು ಸ್ಥಾಪಿಸಿದ್ದಳು. ಸಾಧಕರು, ದೊಡ್ಡದನ್ನು ಸಾಧಿಸಿ ಆದ ನಂತರ ಸಮಾಜ್ ಸೇವೆಗೆ ಎಂದು ಫೌಂಡೇಶನ್ ಸ್ಥಾಪಿಸುವಂತೆ ಈಕೆ ಕೂಡಾ ಒಂದು ತಳಪಾಯ ಇಲ್ಲದ ಫೌಂಡೇಶನ್ ಅನ್ನು ಸ್ಥಾಪಿಸಿದ್ದಳು. ಅದು ಫಂಡ್ ಎತ್ತಲು ಆಕೆ ಹುಡುಕಿಕೊಂಡ ಒಂದು ಉಪಾಯ. ಅದಕ್ಕೆ ಜನರು ‘ಫಂಡೇ’ ಶನ್ ಅಂತ ತಮಾಷೆ ಮಾಡುತ್ತಿದ್ದರು. ಅದರಿಂದ ಖರ್ಚಿಗೆ ಮತ್ತು ಶೋಕಿಗೆ ಒಂದಷ್ಟು ದುಡ್ಡು ಬಂತು, ಹೊಸ ಜನ ಪರಿಚಿತ ಆದರು. ಅವರಲ್ಲೊಬ್ಬ ಈ ರಾಜಕುಮಾರ !

ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ‘ಚಾಯ್ ಮಾರುವ ವ್ಯಕ್ತಿ ‘, ‘ಆತ ಹಿರಿಯರಿಗೆ ಗೌರವ ಕೊಡುತ್ತಾನಂತೆ, ಆದರೆ ಅಡ್ವಾಣಿಯನ್ನು ಮೂಲ ಗುಂಪು ಮಾಡಿದ್ದಾನಂತೆ ‘ ಎಂದು ಹೀಯಾಳಿಸಿದ್ದಳು. ಅದನ್ನೇ ಇಟ್ಟುಕೊಂಡು, ಅಂದು ಮೋದಿಯನ್ನು ‘ ಚಾಯ್ ಮಾರುವ ವ್ಯಕ್ತಿ ‘ ಎಂದು ಏಕವಚನದಲ್ಲಿ ಹೀಯಾಯಿಸಿದವಳು ಇವತ್ತು ದೇಹವನ್ನೇ ಮಾರಿಕೊಳ್ಳುತ್ತಿದ್ದಾಳೆ’ ಎಂದು ವಾಟ್ಸಾಪ್ ಗ್ರೂಪ್ಗಳಲ್ಲಿ ಕಮೆಂಟ್ಗಳ ಸುರಿಮಳೆ ಆಗುತ್ತಿತ್ತು.
ಜನರು ಆ ನಗ್ನ, ಅಶ್ಲೀಲ ವೀಡಿಯೋಗಳನ್ನು, ನವ್ಯ ಫೌಂಡೇಶನ್ ನ ಒಡತಿಯನ್ನು ಆಕೆಯ ‘ ಫೌಂಡೇಶನ್ ‘ ನ ಕಜ್ಜಿಯ ಸಮೇತದ ಡೀಟೇಲ್ಸ್ ನಲ್ಲಿ ನೋಡಿ ‘ ವಾಕ್ ‘ ಅಂತ ಕಾರಿಕೊಂಡಿದ್ದರು. ಕಾರಣ, ವಾಕರಿಕೆ ಬರುವಂತಿದ್ದ ಆಕೆಯ ನಡವಳಿಕೆ. ಮೇಕಪ್ಪಿನಲ್ಲಿ ಒಳ್ಳೆಯ ಹೀರೋಯಿನ್ ಥರ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿದ್ದ ಆಕೆಯನ್ನು ಉಬ್ಬಿದ ಹಲ್ಲುಗಳ ಸಂಗಡ, ಜನ ವಿಷಧವಾಗಿ ಗಮನಿಸಿ ವಿಷಾಧ ಭಾವ ವ್ಯಕ್ತಪಡಿಸಿದ್ದರು. ಅಲ್ಲಿ ಆಕೆ ಬಟ್ಟೆ ಬರಿದಾಗಿಸಿ, ಎಲ್ಲವನ್ನೂ ಬಿಟ್ಟಾಕಿ ಪುರುಷನೊಬ್ಬನ ಮುಂದೆ ಸಮಾಜ ಸೇವಕಿ ಸಮಾಜ ಸೇವೆಗೆ ನಿಂತಿದ್ದಳು! ಬಾತ್ ರೂಮಿನಲ್ಲಿ ಆಕೆಯ ಮಾನ ನೀರಿನಲ್ಲಿ ಝಳ ಝಳ ತೊಳೆದು ಹೋಗಿತ್ತು !

ಆಕೆ ಚನ್ನಪಟ್ಟಣ ಮೂಲದವಳು. ಇದಕ್ಕಿಂತ ತುಂಬಾ ಹಿಂದಿನಿಂದಲೂ ಆಕೆ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿದ್ದಳು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚಾಯ್, ಡಿಕೆಶಿ ಅವರ ಜೊತೆ ಕಾಫಿ ಕುಡಿದಿರುವ ಮಾಹಿತಿ ಇದೆ. ಒಂದು ಸಂದರ್ಭದಲ್ಲಿ ಡಿಕೆಶಿಯವರಿಗೆ ಹೂಗುಚ್ಛ ಸಮರ್ಪಿಸಿ ಡಿಕೆಶಿಯನ್ನು ಆಸೆಯಿಂದ ನೋಡಿದ್ದಳು.

ಆದರೆ ಡಿಕೆಶಿ ಇಂತದ್ದಕ್ಕೆಲ್ಲ ಬಲಿ ಬೀಳುವ ಮಗನಲ್ಲ. ಜನರನ್ನು ಕಣ್ಣಲ್ಲಿ ಅಂದಾಜಿಸಿ ದೂರ ತಳ್ಳುವುದು ಗೊತ್ತು, ಹತ್ತಿರ ಎಳೆದುಕೊಳ್ಳುವುದು ಗೊತ್ತು ಆತನಿಗೆ. ಅದನ್ನು ಡಿಕೆಶಿ ಎಂಬ ಫ್ಯಾಮಿಲಿ ಮ್ಯಾನ್ ಗೆ ಹೇಳಿ ಕೊಡಬೇಕಿಲ್ಲ. ಹಾಗಾಗಿ ಆಕೆಯನ್ನು ತುಸು ದೂರವೇ ಇಟ್ಟಿದ್ದರು ಡಿಕೆಶಿ. ನವ್ಯಳ ಒಂದು ಬಾರಿಯ ಕಾಂಗ್ರೆಸ್ ಪರ ಹೋರಾಟ ಕಂಡು ನಟಿ ರಮ್ಯಾ ಅವರು ಥಂಬ್ಸ್ ಅಪ್ ಮಾಡಿ ‘ ಗುಡ್ ಜಾಬ್ ‘ ಅಂತ ಕೂಡಾ ಹೇಳಿದ್ದರು.

ನಂತರ ರಾಜಕುಮಾರ ಎಂಟ್ರಿ ಆಗಿದ್ದ. ಆತ ರಾಜಕುಮಾರ ಠಾಕಳೆ. ನವ್ಯಶ್ರೀ ಆರ್. ರಾವ್ ವಿರುದ್ಧ ದೂರು ನೀಡಿದ್ದ ರಾಜಕುಮಾರ ಟಾಕಳೆ. ಈ ಹಿಂದೆ ಆತ ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿ ಕಾರ್ಯನಿರ್ವಹಿಸುವಾಗ ಬೆಂಗಳೂರಿನಲ್ಲಿದ್ದ. ಆಗ ನವ್ಯಶ್ರೀ ರಾವ್ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯವಾಗಿದ್ದರು.
ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‍ಜಿಒ ನಡೆಸುವುದಾಗಿ ತಿಳಿಸಿದ್ದರು.

ಇದಾದ ಬಳಿಕ ಡಿಸೆಂಬರ್ 2020 ರಲ್ಲಿ ಸಂದರ್ಭದಲ್ಲಿ ನವ್ಯಶ್ರೀ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂತಾ ಪರಿಚಯ ಮಾಡಿಕೊಂಡಿದ್ದಳು. ‘ ಸಾಫ್ಟ್ ‘ ವೇರ್ ಅಂದರೆ ಸಾಮಾನ್ಯ ವಿಷ್ಯವಾ? ಟಫ್ ಟಾಕಳೆ ಕೂಡಾ ಈ ಮೇಕಪ್ ನಲ್ಲಿ ಬಂದ ಹುಡುಗಿಯ ಬಗ್ಗೆ ಸ್ಮೂತ್ ಆಗಿದ್ದ ! ಮೊದಲು ಪರಿಚಯ ಆಗಿತ್ತು. ಸ್ನೇಹ ಬೆಳೆದಿತ್ತು. ನಂತರ ಏನೆಲ್ಲಾ ಆಗಬೇಕೋ ಅದೆಲ್ಲಾ ಸಾಂಗೋಪಾಂಗವಾಗಿ ನಡೆದಿತ್ತು. ‘ ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದಳು. ಒಂದೂವರೆ ವರ್ಷದ ಪರಿಚಯದಲ್ಲಿ ನಾನು ಬೇರೆಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದೆವು ‘. ”ಗಂಡಸಲ್ವಾ ಸಾರ್ ನಾನು, ನಾನು ಬಿಡುತ್ತೇನೆಯೆ ? ” ಎಂಬ ಅರ್ಥದಲ್ಲಿ ಆತ ಉತ್ತರಿಸಿದ್ದ.

ಇದಾದ ಬಳಿಕ 2021ರ ಡಿಸಂಬರ್ 24ರಂದು ರಾಜಕುಮಾರ ಠಾಕಳೆಗೆ ಬೆದರಿಕೆ ಕರೆ ಮಾಡಿದ್ದಾಳೆ ಎನ್ನುವುದು ಈಗಿನ ದೂರು. 50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಲಿಗೆ, ಮಾನಸಿಕ ಹಿಂಸೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನವ್ಯಶ್ರೀ ಉವಾಚ !
ತೋಟಗಾರಿಕೆ ಇಲಾಖೆಯ ರಾಜಕುಮಾರ್ ಟಾಕಳೆ ನನ್ನ ಗಂಡ ಅವನಿಂದ ನನಗೆ ಏನು ಮೋಸ ಆಗಿದೆ. ಮೋಸ ಹೇಗಾಯ್ತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು 15 ದಿನಗಳಿಂದ ಇಂಡಿಯಾದಲ್ಲೇ ಇರಲಿಲ್ಲ. ವಿದೇಶದಿಂದ ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವೀಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ್‍ಐಆರ್ ಆಗಿರುವ ಬಗ್ಗೆ ಮಾಹಿತಿಯಿಲ್ಲ. ಇಲ್ಲಿವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಹೇಳಿದ್ದಾರೆ. ಮೊದಲು ನಾನು ಕಂಪ್ಲೇಟ್ ಕಾಪಿ (ದೂರಿನ ಪ್ರತಿ) ಪಡೆಯುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನೂ ಪ್ರೆಸ್‍ಮೀಟ್ ಮಾಡಿ ಹೇಳುತ್ತೇನೆ, ಎಲ್ಲರ ಪ್ರಶ್ನೆಗೂ ಉತ್ತರ ಕೊಡ್ತೇನೆ ಎಂದು ತಿಳಿಸಿದ್ದಾಳೆ.

ಅವರಿಬ್ಬರೂ ಮದುವೆಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಗಂಡ ಹೆಂಡತಿಯರ ತರ ಮತ್ತು ಅದಕ್ಕಿಂತಲೂ ಒಂದು ಪಾಲು ಹೆಚ್ಚು ಆತ್ಮೀಯರಾಗಿದ್ದುದನ್ನು ಅವರು ರೆಕಾರ್ಡ್ ಮಾಡಿಕೊಂಡ ವಿಡಿಯೋಗಳು ಪಿಸುಮಾತಿನಲ್ಲಿ ಸಾಕ್ಷಿ ನುಡಿಯುತ್ತಿವೆ. ಅವರಿಬ್ಬರ ನಡುವೆ ಆರೋಪ, ಕೇಸು- ಯಾವುದರಿಂದಲೂ ಏನೂ ಆಗಲ್ಲ. ಒಂದಷ್ಟು ದಿನ ಸುದ್ದಿಯಾಗಿ ನಂತರ ಎಲ್ಲಾ ಮರೆಯಲಾಗುತ್ತದೆ. ರಾಜಕುಮಾರ್ ಟಾಕಳೆ ಕೂಡಾ ಹೆಂಡತಿ ಮಕ್ಕಳ ಜತೆ ಚೆನ್ನಾಗಿದ್ದು, ತನ್ನದೇ ತೋಟಗಾರಿಕೆ ನೌಕರಿ ಮಾಡುತ್ತಿರುತ್ತಾನೆ. ಸಾಧನೆಯ ಹಿಂದೆ ಬಿದ್ದು, ಆಮಿಷಗಳಿಗಾಗಿ ಬಲಿಯಾಗಿ ಹೋದ ಹುಡುಗಿ ಇದರಿಂದ ಚೇತರಿಸಿಕೊಳ್ಳುವುದು, ಮತ್ತೆ ಸಾಮಾಜಿಕವಾಗಿ ಜನರಿಂದ ಒಪ್ಪಿತಕೊಳ್ಳುವುದು ಕಷ್ಟ.

Leave A Reply

Your email address will not be published.