ಗೋಮೂತ್ರ ಖರೀದಿಸಲು ಸರ್ಕಾರದಿಂದ ಯೋಜನೆ!

ಗೋ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬುದು
ತಿಳಿದಿರುವ ವಿಚಾರ. ಈಗ ಇದನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಛತ್ತೀಸ್ ಗಢ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.

ಹೈನುಗಾರಿಕೆ ಹಾಗೂ ದೇಸಿ ತಳಿಯ ಗೋವುಗಳಿಂದ ಲಭಿಸುವ ಮೂತ್ರವನ್ನು ಖರೀದಿಸಲು ಛತ್ತೀಸ್ ಗಢ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಫೆಲ್ ಈ ವಿಚಾರವನ್ನು ತಿಳಿಸಿದ್ದಾರೆ. ಈಗಾಗಲೇ ಗೋ ಧನ್ ನ್ಯಾಯ ಯೋಜನೆ ಹೆಸರಲ್ಲಿ ಗೋವಿನ ಸಗಣಿಯನ್ನು ಪ್ರತಿ ಕೆಜಿಗೆ ಎರಡು ರೂಪಾಯಿಯಂತೆ ಛತ್ತೀಸ್ ಗಢ ಸರ್ಕಾರ ಖರೀದಿಸುತ್ತಿದ್ದು, ಇದೀಗ ಖರೀದಿಸುವ ಗೋ ಮೂತ್ರವನ್ನು ಸಂಸ್ಕರಿಸಿ ಔಷಧ ತಯಾರಿಕೆಗೆ ಬಳಸಲಾಗುವುದು ಎಂದು ಹೇಳಲಾಗಿದೆ.

ಜಾನುವಾರ ಸಾಕಣೆಯನ್ನು ಆರ್ಥಿಕವಾಗಿ ಸಬಲೀಕರಣದ ನಿಟ್ಟಿನಲ್ಲಿ, ಸರ್ಕಾರವು ರೈತರು ಮತ್ತು ಜಾನುವಾರು ಮಾಲೀಕರಿಂದ ಪ್ರತಿ ಲೀಟರ್‌ಗೆ 4 ರಂತೆ ಗೋಮೂತ್ರವನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ ರಾಜ್ಯದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಯ ಪ್ರಾಯೋಗಿಕ ಯೋಜನೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾನುವಾರ ಸಾಕಣೆಯನ್ನು ಆರ್ಥಿಕವಾಗಿ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಹಸುವಿನ ಸಗಣಿ ಸಂಗ್ರಹಿಸುತ್ತಿದೆ. ಇದರ ಜೊತೆಗೆ ಗೋಮೂತ್ರ ಸಂಗ್ರಹಣೆಗೆ ಮುಂದಾಗಿದೆ. ಫೆಬ್ರವರಿ 2022 ರಲ್ಲಿ, ರಾಜ್ಯ ಸರ್ಕಾರವು ರೈತರಿಂದ ಗೋಮೂತ್ರವನ್ನು ಸಂಗ್ರಹಿಸಲು ನಿರ್ಧರಿಸಿದೆ.
ಇಡೀ ಯೋಜನೆಯಲ್ಲಿ ಸಂಗ್ರಹಣೆ ಮತ್ತು ಸಂಶೋಧನೆಯ ವಿಧಾನವನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗಿತ್ತು.

ಸಮಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ಮುಂದೆ ಇಡಲಾಗುವುದು. ಪ್ರತಿ ಲೀಟರ್‌ಗೆ 4 ದರದಲ್ಲಿ ಗೋಮೂತ್ರ ಖರೀದಿಸಲು ಸಮಿತಿ ನಿರ್ಧರಿಸಿದ್ದು, ಸಿಎಂ ಅವರಿಂದ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಲಹೆಗಾರ ಪ್ರದೀಪ್ ಶರ್ಮಾ ಹೇಳಿದ್ದಾರೆ.

Leave A Reply

Your email address will not be published.