ದಕ್ಷಿಣಾಯನ ಎಂದರೇನು? ಕರ್ಕ ಸಂಕ್ರಾತಿ ಯಾವಾಗ ಮತ್ತು ವಿಶೇಷತೆ ಏನು

ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಈ ಕರ್ಕ ಸಂಕ್ರಾಂತಿ ತುಂಬಾನೇ ವಿಶೇಷವಾಗಿದೆ.
ಕರ್ಕ ಸಂಕ್ರಾಂತಿಯನ್ನು ಶ್ರಾವಣ ಮಾಸದ ಆರಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಈ ದಿನ ಉತ್ತರಾಯಣ ಮುಗಿದು ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ಬಾರಿ ಸೂರ್ಯನು ಜುಲೈ 16 ರಂದು ಶನಿವಾರ ಕರ್ಕ ರಾಶಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಲಿದ್ದಾನೆ.

ಸೂರ್ಯನು ಕರ್ಕ ರಾಶಿಯಿಂದ ಧನು ರಾಶಿಗೆ ಪ್ರಯಾಣಿಸುವಾಗ, ಈ ಸಮಯವನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಉತ್ತರಾಯಣದ ಸಮಯದಲ್ಲಿ ಹಗಲು ದೀರ್ಘವಾಗಿರುತ್ತದೆ ಮತ್ತು ರಾತ್ರಿ ಚಿಕ್ಕದಾಗಿರುತ್ತದೆ. ಆದರೆ ದಕ್ಷಿಣಾಯಣದ ಸಮಯದಲ್ಲಿ ರಾತ್ರಿಗಳು ಹೆಚ್ಚಾಗಿರುತ್ತದೆ ಮತ್ತು ಹಗಲುಗಳು ಕಡಿಮೆಯಿರುತ್ತದೆ.

ದಕ್ಷಿಣಾಯಣವನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಉತ್ತರಾಯಣವನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಉತ್ತರಾಯಣವು ಹಬ್ಬ, ವ್ರತ ಮತ್ತು ಶುಭ ಕಾರ್ಯಗಳನ್ನು ಒಳಗೊಂಡಿರುತ್ತದೆ ಮತ್ತು ದಕ್ಷಿಣಾಯನವು ಉಪವಾಸ, ಸಾಧನ, ತಪಸ್ಸು ಮತ್ತು ಧ್ಯಾನದ ಸಮಯ ಎಂದು ಹೇಳಲಾಗುತ್ತದೆ.

ನಂಬಿಕೆಗಳ ಪ್ರಕಾರ, ದಕ್ಷಿಣಾಯನದ ಅವಧಿಯನ್ನು ದೇವತೆಗಳ ರಾತ್ರಿ ಎಂದು ಪರಿಗಣಿಸಲಾಗುತ್ತದೆ. ಆಷಾಢ ಮಾಸದಲ್ಲಿ ದೇವತೆಗಳು ಮಲಗುತ್ತಾರೆ. ಮದುವೆ, ಕ್ಷೌರ, ಉಪನಯನ ಮುಂತಾದ ವಿಶೇಷ ಮಂಗಳ ಕಾರ್ಯಗಳನ್ನು ದಕ್ಷಿಣಾಯಣದಲ್ಲಿ ನಿಷೇಧಿಸಲಾಗಿದೆ.

ಕರ್ಕ ಸಂಕ್ರಾಂತಿಯು ಪಿತೃ ತರ್ಪಣವನ್ನು ಮಾಡಲು ಬಯಸುವವರಿಗೆ ತಮ್ಮ ಪೂರ್ವಜರ ಅಗಲಿದ ಆತ್ಮಗಳಿಗೆ ಶಾಂತಿಯನ್ನು ನೀಡಲು ಅತ್ಯಂತ ಅನುಕೂಲಕರ ಸಮಯವಾಗಿದೆ.

1 Comment
  1. najlepszy sklep says

    Wow, awesome blog structure! How lengthy have you been blogging for?
    you made blogging glance easy. The whole look of your site is great, let alone the content material!
    You can see similar here sklep

Leave A Reply

Your email address will not be published.