ಬೈತಡ್ಕ ಜುಮ್ಮಾ ಮಸೀದಿ ಬಳಿ ಅನುಮಾನಸ್ಪದ ವ್ಯಕ್ತಿ -ತನಿಖೆ ನಡೆಸಲು ದೂರು

ಕಾಣಿಯೂರು: ಕೆಲದಿನಗಳ ಹಿಂದೆ ಕಾರೊಂದು ಸೇತುವೆಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದು ಇಬ್ಬರು ಸಾವಿಗೀಡಾದ ಪರಿಸರದಲ್ಲಿರುವ ಬೈತಡ್ಕ ಜುಮಾ ಮಸೀದಿಯ ಬಳಿ ಕಳೆದ ಎರಡು ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿ ಯೊಬ್ಬ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಜುಮ್ಮಾ ಮಸೀದಿ ದರ್ಗಾ ಶರೀಫ್ ಬೈತಡ್ಕ ಆಡಳಿತ ಸಮಿತಿ ವತಿಯಿಂದ ಆ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿ ರುಕ್ಮ ನಾಯ್ಕ್ ಅವರಿಗೆ ದೂರು ನೀಡಲಾಗಿದೆ.

ಈ ಸಂದರ್ಭದಲ್ಲಿ ಬೈತಡ್ಕ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಉಪಾಧ್ಯಕ್ಷರಾದ ಇಕ್ಬಾಲ್ ಬೈತಡ್ಕ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಅಲೆಕ್ಕಾಡಿ,ಜೊತೆ ಕಾರ್ಯದರ್ಶಿ ಅಬ್ದುಲ್ಲ ಕೆಲಂಬಿರಿ ಕೋಶಾಧಿಕಾರಿ ಸಾಬು ಹಾಜಿ,ಸಮಿತಿ ಸದಸ್ಯರಾದ ಮೊಹಮ್ಮದ್ ಅಲೆಕ್ಕಾಡಿ,ಅಬ್ದುರ್ರಹ್ಮಾನ್ ಸಮಹಾದಿ ಉಪಸ್ಥಿತರಿದ್ದರು.

Leave A Reply

Your email address will not be published.