ಮೂಡುಬಿದ್ರೆ: ಅಕ್ರಮವಾಗಿ ಕಸಾಯಿಖಾನೆಗೆ ಪೊಲೀಸ್ ದಾಳಿ, ಐದು ದನಗಳ ರಕ್ಷಣೆ

ಮೂಡುಬಿದ್ರೆ : ಗುಡ್ಡಗಾಡಿನಲ್ಲಿ ಇದ್ದ ಕಸಾಯಿಖಾನೆಗೆ ಪೊಲೀಸ್ ಅಕ್ರಮವಾಗಿ ದಾಳಿ ಮಾಡಿ, ಐದು ದನಗಳನ್ನು ರಕ್ಷಣೆ ಮಾಡಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಂಡೇಲು ಎಂಬಲ್ಲಿ ನಡೆದಿದೆ.

ಹಂಡೇಲು ನಿವಾಸಿ ಹಾಸನ್ ಬಾವಾ ಎಂಬಾತ ತನ್ನ ಕುಟುಂಬಸ್ಥರೊಂದಿಗೆ ಕಸಾಯಿಖಾನೆ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿಯೊಂದಿಗೆ, ನಿರಂಜನ್ ಕುಮಾರ್ ಉಪನಿರೀಕ್ಷಕರದ ಸುದೀಪ್ ಸಿದ್ದಪ್ಪ ದಿವಾಕರ್ ರೈ ಸಹಿತ ಸಿಬ್ಬಂದಿಗಳು ಅಲ್ಲಿಗೆ ದಾಳಿ ಮಾಡಿ ಐದು ದನಗಳು, ದನದ ಚರ್ಮ, ಅದರ ವಧೆಗೆ ಬಳಸುವ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದು, ನಿರ್ಜನ ಮತ್ತು ಅಕ್ರಮಣವಾಗಿ ಕಸಾಯಿ ಖಾನೆ ನಡೆಸಲು ಪೂರಕ ಪ್ರದೇಶವನ್ನು ಆರೋಪಿ ನಿರ್ಮಿಸಿದ್ದಾರೆ. ಗುಡ್ಡದ ಬಳಿ ಇದ್ದ ತನ್ನ ಮನೆಯಿಂದಲೇ ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿದ್ದ ಎನ್ನುವ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಆರೋಪಿ ಹಾಸನ್ ಬಾವಾ ವಿರುದ್ಧ 2021ರಲ್ಲಿ ಅಕ್ರಮವಾಗಿ ದನದ ಮಾಂಸ ಇರಿಸಿದ್ದ ಪ್ರಕರಣ ದಾಖಲಾಗಿತ್ತು.

Leave A Reply