ಪುತ್ತೂರು : ಬೆಳಂದೂರು ಕೆಲೆಂಬಿರಿಯಲ್ಲಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಕೆಲೆಂಬಿರಿ ನಾರಾಯಣ ಆಚಾರ್ಯ (66) ಎಂಬವರು ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ಜೂ 4ರಂದು ರಾತ್ರಿ ನಡೆದಿದೆ. ಕಣ್ಣಿನ ಪೊರೆಯ ಸಮಸ್ಯೆಯ ಬಗ್ಗೆ ಬಳಲುತ್ತಿದ್ದು, 6 ತಿಂಗಳ ಹಿಂದೆ ಮಂಗಳೂರು ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆಯನ್ನು ಪಡೆಯಲಾಗಿತ್ತು. ಬಳಿಕ ಸರಿಯಾಗಿ ಕಣ್ಣು ಕಾಣದೇ ನಡೆದಾಡಲು ತೊಂದರೆಯಾಗುತ್ತಿತ್ತು.

ಜು. 3 ರಂದು ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿದ್ದವರು ಸುಮಾರು 3 ಗಂಟೆಗೆ ಮನೆಯಲ್ಲಿ ಕಾಣದೆ ಇದ್ದು ಮನೆಯ ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಿ, ಸಿಗದೇ ಇದ್ದು, ಜು. 4ರಂದು ಸಂಜೆ ಪಕ್ಕದ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಸರಿಯಾಗಿ ಕಣ್ಣು ಕಾಣದೇ ಇದ್ದು, ತೋಟದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಮೃತರ ಪುತ್ರ ನಿರ್ಮಲ್ ಕುಮಾರ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತರು ಪತ್ನಿ ಪುಷ್ಪಾ, ಪುತ್ರ ನಿರ್ಮಲ್ ಕುಮಾರ್, ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.