ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ರಸ್ತೆಗೆ ಮಳೆಯ ಕಾರಣ ಬದಲಿ ವ್ಯವಸ್ಥೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತಲುಪಲು ಎರಡು ಮಾರ್ಗಗಳಿದ್ದು, ಒಂದು ಮಾರ್ಗ ಮಳೆಯ ಕಾರಣದಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಳಸ ಮತ್ತು ಹೊರನಾಡು ಸಂಪರ್ಕಿಸುವ ಸೇತುವೆ ಮಳೆಯ ಕಾರಣದಿಂದ ಮುಳುಗಡೆ ಆಗಿದ್ದು, ಈ ಮಾರ್ಗವಾಗಿ ಹೊರನಾಡು ತಲುಪುವವರಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಜನರು ಕಳಸ-ಹಳುವಳ್ಳಿ ಮಾರ್ಗದ ಮೂಲಕ ಹೊರನಾಡನ್ನು ತಲುಪಬಹುದು.

Leave A Reply

Your email address will not be published.