ಹೈದರಾಬಾದ್ ಆಗುತ್ತಾ ‘ ಭಾಗ್ಯನಗರ್ ‘: BJP ಕಾರ್ಯಕಾರಿಣಿ ಎತ್ತಿಕೊಳ್ತು ಹೊಸ ಪ್ರಾಜೆಕ್ಟ್ !

ಹೈದರಾಬಾದ್: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಂತಿಮ ದಿನವಾದ ಭಾನುವಾರದಂದು ಹೈದರಾಬಾದ್ ಅನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸುವ ಮೂಲಕ ಕೇಸರಿ ಬ್ರಿಗೇಡ್‌ ಮತ್ತೊಂದು ನಗರವನ್ನು ಮರು ನಾಮಕರಣ ಮಾಡುವ ಪ್ರಸ್ತಾಪ ಮುಂದಿಟ್ಟಿದೆ.

ಪಕ್ಷದ ಪ್ರತಿನಿಧಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಅನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸುವ ಮೂಲಕ ಕೇಸರಿ ಬ್ರಿಗೇಡ್‌ನ ಮರುನಾಮಕರಣದ ಕನಸನ್ನು ಪುನರುಜ್ಜೀವನಗೊಳಿಸಿದ್ದಾರೆ.”ಹೈದರಾಬಾದ್ ಭಾಗ್ಯನಗರವಾಗಿದೆ, ಅದು ನಮಗೆಲ್ಲರಿಗೂ ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಪಟೇಲ್ ಅವರು ಏಕೀಕೃತ ಭಾರತಕ್ಕೆ ಇಲ್ಲಿ ಅಡಿಪಾಯ ಹಾಕಿದರು ಮತ್ತು ‘ಏಕ್ ಭಾರತ್’ ಎಂಬ ಪದವನ್ನು ಸೃಷ್ಟಿಸಿದ್ದು ಭಾಗ್ಯನಗರದಲ್ಲಿ. ಈಗ ಆ ಕನಸನ್ನು ನೆರವೇರಿಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ಲೆಗಸಿ ಫಾರ್ವರ್ಡ್” ಎಂದು ಮೋದಿಯನ್ನು ಉಲ್ಲೇಖಿಸಿ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಇಲ್ಲಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಟ್ವೀಟ್ ಮೂಲಕ ಹೆಸರು ಬದಲಾವಣೆಯ ಬಿಸಿಯನ್ನು ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇಲ್ಲಿ ಭಾಗ್ಯನಗರದಲ್ಲಿ, ಸರ್ದಾರ್ ಪಟೇಲ್ ನಮಗೆ ಏಕ್ ಭಾರತವನ್ನು ನೀಡಿದರು. ಇಂದು ಇಡೀ ರಾಷ್ಟ್ರೀಯ ಬಿಜೆಪಿ ತಂಡ ಜೆಪಿ ನಡ್ಡಾ ನೇತೃತ್ವದಲ್ಲಿ ನಮ್ಮ ದೇಶವನ್ನು ‘ಶ್ರೇಷ್ಠ ಭಾರತ’ವನ್ನಾಗಿ ಮಾಡಲು ಜಮಾಯಿಸಿದೆ. ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಸಿಎಂ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ನಿರ್ಧರಿಸುತ್ತಾರೆ ಎಂದಿದ್ದಾರೆ.

ಬಿಜೆಪಿ ಸದಸ್ಯರು ಹೈದರಾಬಾದ್ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸುತ್ತಿದ್ದರೂ, 2020 ರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು “ಹೈದರಾಬಾದ್ ಅನ್ನು ಭಾಗ್ಯನಗರವಾಗಿ ಪರಿವರ್ತಿಸಲು” ಬಿಜೆಪಿಗೆ ಮತ ಚಲಾಯಿಸುವಂತೆ ನಾಗರಿಕರನ್ನು ಒತ್ತಾಯಿಸಿದ್ದರು. ಆಗ ನಾಮ ಬದಲಾವಣೆಯ ಈ ವಿಷಯವು ಹಬೆಯಾಡಲು ಪ್ರಾರಂಭವಾಯಿತು.

Leave A Reply

Your email address will not be published.