ಮಂಗಳೂರು : ವರುಣನ ಭಾರೀ ಅಬ್ಬರ, ರೈಲು‌ ಸೇವೆ ರದ್ದು

ಪಡೀಲ್ ಮತ್ತು ಮಂಗಳೂರು ಜಂಕ್ಷನ್ ವಿಭಾಗದ ನಡುವೆ ಬೆಳಗ್ಗೆ 9ರ ಅಸುಪಾಸಿನಲ್ಲಿ ಭೂಕುಸಿತ ಸಂಭವಿಸಿದ್ದರಿಂದ, ಕೆಲವೊಂದು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ರೈಲು ನಂ.06488 ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ಅನ್ ರಿಸರ್ವ್‌ಡ್ ಎಕ್ಸ್‌ಪ್ರೆಸ್ ವಿಶೇಷ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದೇ ರೀತಿಯಲ್ಲಿ ರೈಲು ಸಂಖ್ಯೆ.06489 ಮಂಗಳೂರು ಸೆಂಟ್ರಲ್ ರಸ್ತೆಯ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಸೇವೆ ಕೂಡ ರದ್ದಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ವಿಜಯಪುರದಿಂದ ಹೊರಟಿದ್ದ ರೈಲು ನಂ.07377 ವಿಜಯಪುರ-ಮಂಗಳೂರು ಜಂಕ್ಷನ್ ದೈನಂದಿನ ವಿಶೇಷ ಸೇವೆ ಬುಧವಾರ ಬಂಟ್ವಾಳದಲ್ಲಿ ಕೊನೆಗೊಳ್ಳಲಿದೆ. ಪಡೀಲ್ – ಮಂಗಳೂರಿನ ಭಾಗದಲ್ಲಿ ಭೂ ಕುಸಿತದಿಂದಾಗಿ ಬಂಟ್ವಾಳದಿಂದ ಮಂಗಳೂರು ಜಂಕ್ಷನ್ ನಡುವೆ ರೈಲು ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಸದರ್ನ್ ರೈಲ್ವೆಯ ಪಾಲಕ್ಕಡ್ ರೈಲ್ವೇ ವಿಭಾಗದವರು ಸೂಚನೆ ನೀಡಿದ್ದಾರೆ.

Leave A Reply

Your email address will not be published.