ರಾಜಸ್ಥಾನದಲ್ಲಿ ಟೈಲರ್ ನ ಶಿರಚ್ಛೇದ-ಸಾಮಾಜಿಕ ಜಾಲತಾಣದಲ್ಲಿ ವೈರಲ್!! ಘಟನೆ ಖಂಡಿಸಿ ಬಿಸಿರೋಡ್ ನಲ್ಲಿ ಪ್ರತಿಭಟನೆಗೆ ಕರೆ ನೀಡಿದ ಹಿಂ.ಜಾ.ವೇ!!

ವಿಟ್ಲ:ರಾಜಸ್ಥಾನದಲ್ಲಿ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಐಸಿಸ್ ಉಗ್ರರ ರೀತಿಯಲ್ಲಿ ಶಿರಚ್ಛೇದ ನಡೆಸಿ,ಕೃತ್ಯದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆಯನ್ನು ಖಂಡಿಸಿ ಇಂದು ಬಿ.ಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆಗೆ ಹಿಂಜಾವೆ ವಿಟ್ಲ ತಾಲೂಕು ಕರೆ ನೀಡಿದೆ.

ಬಿ.ಸಿ ರೋಡ್ ನಲ್ಲಿರುವ ತಾಲೂಕು ಕಚೇರಿಯ ಮುಂದೆ ಪ್ರತಿಭಟನಾ ಸಭೆ ನಡೆಯಲಿದ್ದು,ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹದೊಂದಿಗೆ ಪ್ರತಿಭಟನೆ ನಡೆಯಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Leave A Reply

Your email address will not be published.