ಧರ್ಮಸ್ಥಳ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ನೂತನ ಸಾರಥಿ!! ದಕ್ಷ ಆಡಳಿತಗಾರ ಡಾ|ಸತೀಶ್ಚಂದ್ರ ಕಾರ್ಯದರ್ಶಿಯಾಗಿ ನೇಮಕ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ. ಯಶೋವರ್ಮ ನಿಧನದ ಬಳಿಕ, ಶಿಕ್ಷಣ ಸಂಸ್ಥೆಗಳ ನೂತನ ಕಾರ್ಯದರ್ಶಿಯಾಗಿ ದಕ್ಷ ಆಡಳಿತಗಾರ, ಶಿಸ್ತಿನ ಸಿಪಾಯಿ ಎಂದೇ ಚಿರಪರಿಚಿತರಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯಾಗಿರುವ ಸುರ್ಯಗುತ್ತು ಡಾ|ಎಸ್. ಸತೀಶ್ಚಂದ್ರ ಅವರನ್ನು ನೇಮಕಮಾಡಲಾಗಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಸುರ್ಯಗುತ್ತು ನಿವಾಸಿಯಾದ ಸತೀಶ್ಚಂದ್ರ ಉಜಿರೆಯ ಶಿಕ್ಷಣ ಸಂಸ್ಥೆಗಳ ಹಳೇ ವಿದ್ಯಾರ್ಥಿಯಾಗಿದ್ದು, ತನ್ನ ಶಿಕ್ಷಣದ ಬಳಿಕ ಅದೇ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ,ಮುಖ್ಯಸ್ಥರಾಗಿ ಆ ಬಳಿಕ ಪ್ರಾಂಶುಪಾಲರಾಗಿ ನಿವೃತ್ತರಾದವರು.

ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಶಿಸ್ತಿನ ಸಿಪಾಯಿ, ದಕ್ಷ ಆಡಳಿತಗಾರರೆಂದೇ ಚಿರಪರಿಚಿತರಾಗಿರುವ ಸತೀಶ್ಚಂದ್ರ ಅವರು ತನ್ನ ಕರ್ತವ್ಯದ ಅವಧಿಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

Leave A Reply

Your email address will not be published.