ವಿಟ್ಲ:ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ತಿರುವು!! ಯುವಕನೊಬ್ಬನ ಕೈವಾಡವಿದೆ ಎನ್ನುವ ಗಂಭೀರ ಆರೋಪ-ತನಿಖೆ ತೀವ್ರ

ವಿಟ್ಲ:ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಮನೆಗೆ ಹಿಂದಿರುಗಿ ಬಾರದೆ ನಾಪತ್ತೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ತಿರುವು ಪಡೆದುಕೊಂಡಿದ್ದು ಪೊಲೀಸರ ತನಿಖೆ ತೀವ್ರ ಗೊಂಡ ಬಗ್ಗೆ ವರದಿಯಾಗಿದೆ. ಇಡೀ ಪ್ರಕರಣದ ಸುತ್ತ ಯುವಕನೋರ್ವನ ಕೈವಾಡವಿದೆ ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿದೆ.

ಘಟನೆ ವಿವರ:ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಕೊಲ್ನಾಡು ಸೆರ್ಕಳ ಎಂಬಲ್ಲಿಯ ಅಕ್ಷತಾ(20)ಜೂನ್ 17ರ ಮುಂಜಾನೆ ತನ್ನ ಚಿಕ್ಕಮ್ಮನ ಮನೆಯಿಂದಲೇ ಕಾಲೇಜಿಗೆ ಹೊರಟು ಹೋದವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಳು. ಇತ್ತ ರಾತ್ರಿಯಾದರೂ ಮಗಳು ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಆಕೆಯ ಚಿಕ್ಕಮ್ಮ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದು ನಾಪತ್ತೆ ಪ್ರಕರಣಕ್ಕೆ ತಿರುವು ಎಂಬಂತೆ ಮಾಣಿಲ ಮೂಲದ ಯುವಕನೊಬ್ಬನ ಹೆಸರು ಕೇಳಿ ಬಂದಿದೆ.ಆತನೇ ಆಕೆಯನ್ನು ನಾಶ್ರಾ ಕ್ರಾಸ್ ಬಳಿಯಿಂದ ವಾಹನವೊಂದರಲ್ಲಿ ಕರೆದುಕೊಂಡು ಹೋಗಿ ಉಪ್ಪಿನಂಗಡಿಯಲ್ಲಿ ಬಿಟ್ಟಿದ್ದಾನೆ ಎನ್ನುವ ಮಾಹಿತಿ ಲಭಿಸಿದ್ದು,ಯುವತಿಯ ಪತ್ತೆಗೆ ತನಿಖೆ ಚುರುಕುಗೊಂಡಿದೆ.

Leave A Reply

Your email address will not be published.