ಒಂದು ವಾರದಿಂದ ಕೊಳೆಯುತ್ತಿದೆ ಬೆಳ್ಳಾರೆ ಸಂತೆ ಮಾರುಕಟ್ಟೆಯಲ್ಲಿ ತ್ಯಾಜ್ಯ

ಸುಳ್ಯ : ತಾಲೂಕಿನ ಎರಡನೇ ಪೇಟೆಯಾಗಿರುವ ಬೆಳ್ಳಾರೆಯ ಬಸ್ ತಂಗುದಾಣದ ಪಕ್ಕವಿರುವ ಸಂತೆ ಮಾರುಕಟ್ಟೆಯ ಸುತ್ತ ಕಳೆದ 6 ದಿನಗಳಿಂದ ತರಕಾರಿ ಸೇರಿದಂತೆ ಇತರ ತ್ಯಾಜ್ಯಗಳು ಕೊಳೆತು ನಾರುತ್ತಿದೆ.

ಈ ಕುರಿತು ಬೆಳ್ಳಾರೆಯ ಸಾಮಾಜಿಕ ಕಾರ್ಯಕರ್ತ ಸದಾಶಿವ ಪೂಜಾರಿಯವರು ಗ್ರಾ.ಪಂ.ಗಮನಕ್ಕೆ ಕಳೆದ ಸೋಮವಾರವೇ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಶನಿವಾರ ನಡೆದ ಸಂತೆಯ ತ್ಯಾಜ್ಯ ಈ ಶುಕ್ರವಾರದವರೆಗೂ ತೆರವು ಮಾಡಿಲ್ಲ.ಈ ಕುರಿತು ಈಗಾಗಲೇ ಸುಳ್ಯ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಹಾಗೂ ದ.ಕ.ಜಿಲ್ಲಾಧಿಕಾರಿಯವರಿಗೂ ದೂರು ನೀಡಲಾಗಿದೆ ಎನ್ನಲಾಗಿದೆ.

ಈ ತ್ಯಾಜ್ಯದಿಂದಾಗಿ ಬೆಳ್ಳಾರೆ ಪೇಟೆ ಹಾಗೂ ಬಸ್ ತಂಗುದಾಣದಲ್ಲಿರುವ ಪ್ರಯಾಣಿಕರಿಗೆ ಮೂಗು ಬಿಡದ ಪರಿಸ್ಥಿತಿ ಬಂದಿದೆ

Leave A Reply

Your email address will not be published.