ಮನೆಗೆ ಶೀಟ್ ಹಾಕಲೆಂದು ಅಳತೆ ತೆಗೆಯಲು ಹೋದ ವ್ಯಕ್ತಿ, ಮಹಡಿಯಿಂದ ಕೆಳಗೆ ಬಿದ್ದು ಸಾವು !

ಛಾವಣಿಗೆ ಶೀಟ್ ಹಾಕಲು ಅಳತೆ ಮಾಡುತ್ತಿದ್ದ ಸಂದರ್ಭದಲ್ಲಿ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮನೆಯೊಂದರ ಕೆಲಸಕ್ಕೆಂದು ಬಂದ ಸಂದರ್ಭದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ಕಾಸರಗೋಡಿನ ಕುಂಬ್ಳೆ ಸಮೀಪ ಮಂಡೆಕಾಪು ಎಂಬಲ್ಲಿ ಈ ಘಟನೆ ನಡೆದಿದೆ.

ಹೇರೂರು ಕಂಗ್ವೆ ನಿವಾಸಿ ಸಂದೀಪ್ ಶೆಟ್ಟಿ (35) ಮೃತ ಯುವಕ.

ಸಂದೀಪ್ ಅವಿವಾಹಿತರಾಗಿದ್ದು ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸಂದೀಪ್ ಯುವ ಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿದ್ದು, ಫ್ರೆಂಡ್ಸ್ ಹೇರೂರು ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಜೊತೆಗೆ ಹೇರೂರು ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದರು

Leave A Reply

Your email address will not be published.