ಭಾರತೀಯ ಸೇನೆ ಸೇರಲಿಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಕೇಂದ್ರ ಸರ್ಕಾರದಿಂದ ಸೈನಿಕರಿಗಾಗಿಯೇ ಸಿದ್ಧವಾಗಿದೆ ವಿನೂತನ ‘ಅಗ್ನಿಪಥ್’ ಯೋಜನೆ

ಭಾರತೀಯ ಸೇನೆ ಸೇರುವವರಿಗೆ ಶುಭ ಸುದ್ದಿ ಇದೆ. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್‌ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯಡಿ ಮೂರು ಸೇನೆಗೆ ಯುವ ಜನತೆ ಸೇರಬಹುದಾಗಿದೆ. ಈ ಯೋಜನೆಯಡಿ ಸೈನಿಕರನ್ನು ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ.

ಹೇಗಿರಲಿದೆ ಈ ಯೋಜನೆ?

ಆಯ್ಕೆಗೊಂಡ ಅಭ್ಯರ್ಥಿಗಳಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಸೈನ್ಯಕ್ಕೆ ಸೇರ್ಪಡೆಯಾದವರ ಪೈಕಿ ಶೇ. 20-25ರಷ್ಟು ಅಭ್ಯರ್ಥಿಗಳನ್ನು ಮುಂದುವರಿಸಲಾಗುತ್ತದೆ. 4 ವರ್ಷ ಪೂರ್ಣಗೊಂಡ ಬಳಿಕ ಬಿಡುಗಡೆಯಾಗುತ್ತಿರುವ ಸೈನಿಕರಿಗೆ 10 -12 ಲಕ್ಷ ರೂ.ಪ್ಯಾಕೇಜ್‌ ನೀಡಲಾಗುತ್ತದೆ.

ಈಗಾಗಲೇ ಸಿದ್ಧಪಡಿಸಿದ ಪ್ಲ್ಯಾನ್‌ ನಿಗದಿಯಂತೆ ನಡೆದರೆ ಮುಂದಿನ ಮೂರು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ 19 ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳಿಂದ ಭಾರತೀಯ ಸೈನ್ಯ ಸ್ಥಗಿತಗೊಳಿಸಿತ್ತು.

Leave A Reply

Your email address will not be published.