ಶ್ರೀಧರಗಡ್ಡೆ ಗ್ರಾಮಕ್ಕೆ ಮಕ್ಕಳ ರಕ್ಷಣಾಆಯೋಗಭೇಟಿ ಪರಿಶೀಲನೆ

ಸಿರುಗುಪ್ಪ :ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಮೇ.೩೦ ರಂದು ಬಟ್ಟೆ ತೊಳೆಯಲು ಹೋಗಿ ಕೆರೆಯಲ್ಲಿ ಕಾಲು ಜಾರಿಬಿದ್ದುಇಬ್ಬರು ಬಾಲಕಿಯರು ಮೃತಪಟ್ಟಘಟನಾ ಸ್ಥಳಕ್ಕೆ ಮೇ.೩೧ರಂದು ಮಕ್ಕಳ ಹಕ್ಕುಗಳ ರಕ್ಷಣಾಆಯೋಗದ ಸದಸ್ಯ ಹೆಚ್.ಸಿ.ರಾಘವೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮೃತರಕುಟುಂಬಕ್ಕೆ ತೆರಳಿ ಸಾಂತ್ವಾನ ಹೇಳಿದರು. ಅಲ್ಲದೇಕುಟುಂಬಸ್ಥರಿAದ ಹಾಗೂ ಬಾಲಕೀಯರುಓದುತ್ತಿದ್ದ ಶಾಲೆಗಳಿಗೆ ತೆರಳಿ ಘಟನೆಯ ವಿವರವನ್ನು ಪಡೆಯಲಾಯಿತು.
ಗ್ರಾಮದಲ್ಲಿ ಪರಿಶೀಲನೆ ನಡೆಸುತ್ತಿರುವಾಗಕಳೆದÀ ಹಿಂದೆ ಸುರಿದ ಮಳೆಯಿಂದಾಗಿ ವೇದಾವತಿ ನದಿಯಲ್ಲಿ ಪ್ರವಾಹ ಹೆಚ್ಚಿದಾಗಿನಿಂದ ನೀರು ಸರಬರಾಜು ಮಾಡುವ ಪಂಪ್‌ಸೆಟ್ ಬಿಚ್ಚಿಟ್ಟಿದ್ದು, ೨೦ ದಿನಗಳಿಂದ ಬಳಕೆಗಾಗಿ ನೀರು ಬಿಡದಿರುವುದು, ಪ್ರವಾಹ ಬಂದ ಪ್ರತಿ ಸಲವು ಇದೇ ಸಮಸ್ಯೆಯಾಗುತ್ತದೆ. ಪಂಪ್‌ಆಪರೇಟರನ್ನು ಸಂಪರ್ಕಿಸಿದರೆ ಹೋಗಿ ಪಂಚಾಯಿತಿಯಲ್ಲಿ ಕೇಳಿ ಎಂದುಉತ್ತರಿಸುತ್ತಾರೆ. ಹಾಗೂ ಕುಡಿಯುವಕೆರೆಯಿಂದಲೂ ನೀರು ಸರಬರಾಜು ಮಾಡದಿರುವುದೇ ಮುಖ್ಯಕಾರಣವೆಂದುಗ್ರಾಮಸ್ಥರು ಆರೋಪಿಸಿದರು.

ಸಮರ್ಪಕ ನೀರು ಸರಬರಾಜಿಗೆ ಅಧಿಕಾರಿಗಳ ನಿರ್ಲಕ್ಷö್ಯ : ಗ್ರಾಮದಲ್ಲಿ ಶುದ್ದಕುಡಿಯುವ ನೀರಿನಘಟಕವಿದ್ದುಅದು ಬಳಕೆ ನೀರುಇಲ್ಲದಿರುವುದರಿಂದಚಾಲ್ತಿಯಲ್ಲಿಲ್ಲಕುಡಿಯುವ ನೀರಿಗಾಗಿ ೩ ಕಿ.ಮೀ. ದೂರದ ಕುಡುದರಾಳ್ ಗ್ರಾಮಕ್ಕೆ ಹೋಗಬೇಕಿದೆ.

ಬೈಕ್, ಸೈಕಲ್‌ಇರುವವರು ಕುಡುದರಾಳ್ ಗ್ರಾಮದಿಂದನೀರುತAದುಕುಡಿಯುತ್ತಾರೆಇಲ್ಲದಿರುವವರುಕೆರೆಯಲ್ಲಿನ ಮಲಿನ ನೀರನ್ನೇಕುಡಿಯುವ ಅನಿವಾರ್ಯತೆಎದುರಾಗಿದೆ. ಕುಡಿಯುವ ನೀರಿಗಾಗಿಕೆರೆ ನಿರ್ಮಾಣ ಮಾಡಲಾಗಿದೆಯಾದರೂಅದನ್ನು ಶುದ್ದಿಕರಿಸುತ್ತಿಲ್ಲ, ಹಾಗೂ ಸರಬರಾಜು ಮಾಡಿಲ್ಲ ಈಗ ಅಧಿಕಾರಿಗಳು ಬಂದಿದ್ದಾರೆAದುಕೆರೆ ನೀರು ಬಿಟ್ಟಿದ್ದಾರೆ.

ಮೊದಲೇ ನೀರು ಬಿಟ್ಟಿದ್ದರೆ ಈ ಘಟನೆ ಸಂಭವಿಸುತ್ತಿರಲ್ಲಿಲ್ಲವೆAದು ಮೃತ ಬಾಲಕೀಯರ ಸಂಬAದಿಕರುಆಕ್ರೋಶ ವ್ಯಕ್ತಪಡಿಸಿದರು.
ಆಯೋಗದ ಸದಸ್ಯರಿಂದ ಅಧಿಕಾರಿಗಳ ತರಾಟೆ : ಗ್ರಾಮದ ಸಾರ್ವಜನಿಕರಆರೋಪದಕುರಿತುಗ್ರಾಮೀಣಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯಇಲಾಖೆಯ ಸಹಾಯಕಅಭಿಯಂತರ ಹಾಗೂ ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳನ್ನು ೨೦ದಿನಗಳ ಕಾಲ ನೀರು ಸರಬರಾಜು ಮಾಡದಿರಲುಕಾರಣವೇನು, ಕೆರೆ ನೀರು ಸರಬರಾಜಿನಗುತ್ತಿಗೆದಾರರ ಮಾಹಿತಿ ಲಾಗ್ ಪುಸ್ತಕದ ಬಗ್ಗೆ ವಿಚಾರಿಸಿದಾಗ ಲಾಗ್ ಪುಸ್ತಕ ಇಲ್ಲದಿರುವ ಬಗ್ಗೆ ತಿಳಿದು ನಿಮ್ಮ ನಿರ್ಲಕ್ಷö್ಯದ ಬಗ್ಗೆ ಕೆಂಡಾಮAಡಲರಾದರು.

ಬಾಲಕೀಯರುಅಭ್ಯಾಸ ಮಾಡುತ್ತಿದ್ದ ಶಾಲೆಗಳಿಗೆ ಬೇಟಿ ನೀಡಿಮಕ್ಕಳ ಹಾಜರಾತಿ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ಮಕ್ಕಳ ಬಗ್ಗೆ ತೀವ್ರ ನಿಗಾವಹಿಸುವಂತೆ ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದಅವರುಪ್ರಾಥಮಿಕವಾಗಿ ಪರಿಶೀಲನೆ ನಡೆಸಿದ್ದು, ನೀರು ಸರಬರಾಜು ಮಾಡದಿರುವುದು, ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷö್ಯಎದ್ದುಕಾಣುತ್ತಿದ್ದು, ಅಧಿಕಾರಿಗಳ ಸಮನ್ವಯತೆ, ಸಹಕಾರದಕೊರತೆಎದ್ದುಕಾಣುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಈ ಬಗ್ಗೆ ಸರ್ಕಾರಕ್ಕೆ ಮೃತರಕುಟುಂಬಕ್ಕೆ ಸಹಾಯವಾಗುವಂತೆ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುವುದೆಂದು ತಿಳಿಸಿದರು.

ಇದೇ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿರಾಜನಾಯಕ, ಮಕ್ಕಳ ರಕ್ಷಣಾಘಟಕದ ಕಾನೂನು ಸಲಹೆಗಾರಈಶ್ವರ್, ತಾಲೂಕುಶಿಶು ಅಭಿವೃದ್ದಿಯೋಜನಾಧಿಕಾರಿಎ.ಜಲಾಲಪ್ಪ, ಗ್ರಾಮೀಣಕುಡಿಯುವ ನೀರು ಸರಬರಾಜು ನೈರ್ಮಲ್ಯಇಲಾಖೆಯ ಸಹಾಯಕಅಭಿಯಂತರಎಸ್.ರವೀAದ್ರ ನಾಯ್ಕ್, ಕುಡುದರಾಳ್ ಗ್ರಾ.ಪಂ.ಅಭಿವೃದ್ದಿಅಧಿಕಾರಿ ಬಸವರಾಜ್,ಎ.ಎಸ್.ಐಕುಮಾರಸ್ವಾಮಿ, ಇನ್ನಿತರರುಇದ್ದರು.

Leave A Reply

Your email address will not be published.