ಮೇ.27: ಟಿಪ್ಪರ್-ಲಾರಿ ಹಾಗೂ ಕಾರು ಮಧ್ಯೆ ಸರಣಿ ಅಪಘಾತ ನಡೆದು ಕಾರು ಚಾಲಕ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಇಂದು(ಮೇ.27) ಸಂಜೆ ಸಂಭವಿಸಿದೆ.
ಕಾರು ಚಾಲಕನನ್ನು ಶಿರಾಡಿಯ ನಿವಾಸಿ ನೆಲ್ಸನ್(40) ಎಂದು ಗುರುತಿಸಲಾಗಿದೆ. ನೆಲ್ಯಾಡಿಯಿಂದ ಶಿರಾಡಿ ಕಡೆ ಹೋಗುತ್ತಿದ್ದ ಮಾರುತಿ ಇಕೋ ಕಾರು ಹಾಗೂ ಎದುರುಗಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಮಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿರುವ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿಯಾಗಿದೆ. ಕಾರು ಬಾಗಶಃ ಪುಡಿಪುಡಿಯಾಗಿದ್ದು ಕಾರಿನಲ್ಲಿದ್ದ ಸಹಪ್ರಯಾಣಿಕ ಪಿಲ್ಲಿಕ್ಸ್ ಅಬ್ರಾಹಂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Praveen Chennavara Palthady village & post Kadaba Taluq D.K.-For contact- 7090806456