ಮುಂಗಾರು ಸಿಂಗರಿಸಿಕೊಂಡು ಬರಲು ಕ್ಷಣಗಣನೆ | ರಾಜ್ಯಕ್ಕೆ ಈ ದಿನ ಎಂಟ್ರಿ !!!

ಮುಂಗಾರು ಸಿಂಗರಿಸಿಕೊಂಡು ಬರುತ್ತಿದ್ದಾಳೆ. ಮದುವನಗಿತ್ತಿಯಂತೆ ಬಲಗಾಲಿಟ್ಟು ಬರಲು ಆಕೆ ಸಜ್ಜಾಗಿದ್ದಾಳೆ. ಇನ್ನೇನು ಕೆಲವೇ ಕೆಲವು ದಿನಗಳು. ಅಂಡಮಾನ್ ನ ಟೂರ್ ಮುಗಿಸಿಕೊಂಡು, ಕೇರಳದ ಗಹನ ಕಾಡುಗಳಲ್ಲಿ ಸುಯ್ಯನೆ ಸುಳಿದು ದಾಪುಗಾಲಿಟ್ಟು ತಣ್ಣನೆ ಅನುಭವ ನೀಡಲು ಅದೋ ಬಂದೇಬಿಡುತ್ತಾಳೆ. ಹೌದು, ಮುಂಗಾರು ಮಳೆನಾ ಸ್ವಾಗತಿಸೋಣ, ಆಸ್ವಾದಿಸೋಣ.

ಮೇ ತಿಂಗಳಲ್ಲೇ ಮಳೆರಾಯ ಇಳೆಯನ್ನು ತಂಪಾಗಿಸಿದ್ದಾನೆ. ಹಾಗಾಗಿ ಇನ್ನು ಸ್ವಲ್ಪ ದಿನದಲ್ಲೇ ಮುಂಗಾರು ನಾಚುತ್ತಾ ಬಂದು ಭೋರ್ಗರೆಯಲು ಶುರು ಮಾಡುತ್ತಾಳೆ. ಬನ್ನಿ ತಿಳಿಯೋಣ ಈ ಬಾರಿಯ ಮುಂಗಾರಿನ ಆರಂಭದ ಬಗ್ಗೆ.

ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮುಂಗಾರು ಅಪ್ಪಳಿಸಿದ ನಂತರ ಹವಾಮಾನ ಇಲಾಖೆಯು ಮೇ 27 ರಂದು ಮುಂಗಾರು ಕೇರಳವನ್ನು ತಲುಪುತ್ತದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇದು ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಆದರೆ ಈ ಬಾರಿ ಅದು ಸಮಯಕ್ಕಿಂತ ಮುಂಚಿತವಾಗಿಯೇ ಅಂದರೆ ಮೇ. 27 ರಂದು ತಲುಪುತ್ತದೆ ಎಂಬ ಹೇಳಿಕೆ ನೀಡಿತ್ತು. ಆದರೀಗ ಜೂನ್ 1 ರ ಮೊದಲು ಕೇರಳದಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತನ್ನ ಮತ್ತೊಮ್ಮೆ ಹೇಳಿದೆ. ಐಎಂಡಿ ತನ್ನ ಟ್ವೀಟ್‌ನಲ್ಲಿ ಮುಂದಿನ 2-3 ದಿನಗಳಲ್ಲಿ ಕೇರಳದ ಮೇಲೆ ಮುಂಗಾರು ಆರಂಭಕ್ಕೆ ಅನುಕೂಲಕರವಾದ ವಾತಾವರಣ ಆರಂಭವಾಗಿದೆ ಎಂದಿದೆ.

ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬಕ್ಕೆ ಅನುಕೂಲಕರ ವಾತಾವರಣ ಇಲ್ಲದಿರುವುದೇ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಮುಂದುವರೆಯಲಿದೆ. ಇದರಿಂದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಈ ವರ್ಷ ಶೇ.99ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮು ರೈತರಿಗೆ ಸಂತಸ ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಆಗ್ನೇಯ ಅರೇಬಿಯನ್ ಸಮುದ್ರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮಾಹಿತಿ ಸಂಸ್ಥೆ ಪ್ರೈಮೆಟ್ ತಿಳಿಸಿದೆ. ಮಾನ್ಸೂನ್ ಸಾಮಾನ್ಯ ಸಮಯಕ್ಕೆ ಕೇರಳವನ್ನು ತಲುಪುತ್ತದೆ ಮತ್ತು ತಡವಾಗುವುದಿಲ್ಲ ಎಂದಿದೆ.

ಭಾರತದಲ್ಲಿ ಜೂನ್ ನಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ ವರೆಗೆ ಅಂದರೆ ನಾಲ್ಕು ತಿಂಗಳವರೆಗೆ ಇರುತ್ತದೆ. ಭಾರತದಲ್ಲಿ ಮೊದಲು ಕೇರಳದ ಕರಾವಳಿಗೆ ಅಪ್ಪಳಿಸುತ್ತದೆ ಮತ್ತು ಮಳೆಯೊಂದಿಗೆ ತಂಪಾಗುತ್ತದೆ.

ಕೇರಳ ಕರಾವಳಿ ಮತ್ತು ಪಕ್ಕದ ಆಗ್ನಿಯ ಅರಬ್ಬಿ ಸಮುದ್ರದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಿದೆ. ಹೀಗಾಗಿ, ಮುಂದಿನ 2-3 ದಿನಗಳಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ ಎಂದು IMD ಹೇಳಿದೆ.

ಮೇ 16 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು IMD ಹಿಂದೆ ಘೋಷಿಸಿತ್ತು. ಮುಂಗಾರು ಈಗ ಕೇರಳದ ಅಕ್ಷಾಂಶವನ್ನು ತಲುಪಿದೆ. ಮೇ 30 ಮತ್ತು ಜೂನ್ 2 ರ ನಡುವೆ ಮುಂಗಾರು ಮಳೆ ಎನ್ನಲಾಗಿದೆ. ತೀವ್ರಗೊಳ್ಳಬಹುದು

ಕೇರಳದ ನಂತರ ಮುಂಗಾರು ಮಹಾರಾಷ್ಟ್ರದತ್ತ ಸಾಗುತ್ತದೆ. ಸಾಮಾನ್ಯವಾಗಿ ಈ ಅವಧಿಯು ಜೂನ್ 10 ರ ಆಸುಪಾಸಿನಲ್ಲಿದೆ. ನಂತರ ಅದು ದೆಹಲಿಯನ್ನು ತಲುಪುತ್ತದೆ, ಅದು ಜೂನ್ ಕೊನೆಯಾಗಿರುತ್ತದೆ ಮತ್ತು ದೆಹಲಿಯ ನಂತರ ಅದು ಜುಲೈನಲ್ಲಿ ಇಡೀ ಉತ್ತರ ಭಾರತವನ್ನು ಮತ್ತು ಇಡೀ ಭಾರತದಲ್ಲಿ ಮಳೆಯ ರೂಪದಲ್ಲಿ ಆವರಿಸುತ್ತದೆ.

Leave A Reply

Your email address will not be published.