ಬೆಳ್ತಂಗಡಿ: ದೇವಾಲಯಕ್ಕೆ ಬಂದಿದ್ದ ಹಿಂದೂ ಯುವತಿಯೊಂದಿಗೆ ಪ್ರೀತಿ-ಬೆಂಗಳೂರಿನಲ್ಲಿ ಮದುವೆ!!

ಬೆಳ್ತಂಗಡಿ: ತಾಲೂಕಿನ ಕೊಕ್ಕಡದ ಮುಸ್ಲಿಂ ಆಟೋ ಡ್ರೈವರ್ ಒಬ್ಬ, ಈ ಹಿಂದೆ ಕೊಕ್ಕಡದ ಸೌತಡ್ಕ ದೇವಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು,ಪ್ರೀತಿಸಿ ಮದುವೆಯಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳು ಕಿಡಿಕಾರಿವೆ.

ಹೌದು, ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಮೇ ತಿಂಗಳಿನಲ್ಲಿ ರಿಜಿಸ್ಟರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಹರಿದಾಡಿದ್ದು, ಇದೊಂದು ಲವ್ ಜಿಹಾದ್ ಷಡ್ಯಂತ್ರ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಇವರಿಬ್ಬರು ಪರಿಚಿತರಾಗಿದ್ದರು ಎನ್ನುವ ವಿಚಾರ ಪರಿಸರದ ಜನತೆಗೂ ಅರಿವಿಗೆ ಬಾರದ ಹಿನ್ನೆಲೆಯಲ್ಲಿ, ಭಿನ್ನ ಕೋಮಿನ ಪ್ರೇಮಿಗಳಿಬ್ಬರು ಮದುವೆಯಾಗುವ ಹಂತಕ್ಕೆ ತಲುಪಿದ್ದಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಿದಾಡಿದ್ದಲ್ಲದೆ, ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟರ್ ಗಳು ಸುದ್ದಿ ಮಾಡುತ್ತಿದೆ. ಅಸಲಿಗೆ ಆದದ್ದೇನೆಂದರೆ, ಆಕೆ ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದಳು. ಆಗ ಈತನ ಆಟೋದಲ್ಲಿ ಪ್ರಯಾಣಿಸಿ ದ್ದಳು. ಆಟೋದಲ್ಲಿ ಹೋಗುವಾಗ ಈತ ಮೆಲ್ಲನೆ ಗಾಳ ಎಸೆದಿದ್ದ. ಹೇಗಾದರೂ ಮಾಡಿ ಆಕೆಯ ನಂಬರ್ ಕಲೆಕ್ಟ್ ಮಾಡಬೇಕಲ್ಲ ?. ಅದಕ್ಕಾಗಿ, ” ಮೇಡಂ, ನೀವು ನೆಕ್ಸ್ಟ್ ಟೈಮ್ ಬಂದಾಗ ನಿಮ್ಮನ್ನು ನಾನೇ ಕರೆದುಕೊಂಡು ಹೋಗುತ್ತೇನೆ. ಆಗ ನನಗೆ ಕರೆ ಮಾಡಿ ಎಂದು ಆಕೆಯ ಫೋನಿಂದ ಒಂದು ಮಿಸ್ ಕಾಲ್ ಅನ್ನು ತನ್ನ ಫೋನಿಗೆ ಮಾಡಿಸಿಕೊಂಡಿದ್ದಾನೆ. ಆಕೆ ಕೊಟ್ಟ ಮಿಸ್ ಕಾಲನ್ನು ಮಿಸ್ ಆಗದಂತೆ ಸೇವ್ ಮಾಡಿಕೊಂಡು ಮೊದಲು ಮೇಡಮ್ ಮೇಡಮ್ ಅಂತಲೇ ಚಾಟಿಂಗ್ ಶುರು ಮಾಡಿದ್ದಾನೆ. ನಂತರ ಒಳ್ಳೆಯ ಮಾತಾಡಿ ಬುಟ್ಟಿಗೆ ಬೀಳಿಸಿಕೊಂಡು ಪ್ರೀತಿಯ ನಾಟಕ ಆಡಿ, ಈಗ ಮದುವೆ ಕೂಡಾ ನಡೆದು ಹೋಗಿದೆ. ಅದು ಎಷ್ಟರಮಟ್ಟಿಗೆ ಬರ್ಕತ್ ಆಗುತ್ತೆ ಅಂತ ಯಾರು ಬೇಕಾದರೂ ಊಹಿಸಬಹುದು. ಹಿಂದೂ ಹುಡುಗಿಯನ್ನು ಮದುವೆಯಾಗಿ, ನಂತರ ಕಿರುಕುಳ ಕೊಡುವುದು ಹಿಂಸಿಸುವುದು ಮತ್ತು ಕೊನೆಗೆ ಆತ್ಮಹತ್ಯೆಗೆ ಪ್ರೇರೇಪಿಸಿ ಸಾಯಿಸುವುದು ಎಗ್ಗಿಲ್ಲದೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಗಟ್ಟಿ ಮನಸ್ಸಿನ ಹುಡುಗಿಯಾಗಿದ್ದರೆ ಕೊಲೆ ಮಾಡಿ ಕೈತೊಳೆದು ಇನ್ನೊಂದು ನಿಕಾಹ ಮಾಡಿಕೊಳ್ಳುವ ಘಟನೆಗಳು ಪದೇಪದೇ ಘಟಿಸುತ್ತಿರುವ ಕಾರಣದಿಂದಲೇ, ಲವ್ ಜಿಹಾದಿಗೆ ಈ ಮಟ್ಟಿಗಿನ ವ್ಯಾಪಕ ವಿರೋಧ ಕಂಡುಬರುತ್ತಿರುವುದು.

Leave A Reply

Your email address will not be published.