ತರಳಬಾಳು ಜಗದ್ಗುರು ಸಿರಿಗೆರೆಯ ಶ್ರೀ ಶ್ರೀ ಶ್ರೀ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಜೀಗಳವರಿಂದ ತುಪ್ಪದಹಳ್ಳಿ ಕೆರೆಗೆ ಬಾಗೀನ .

ಜಗಳೂರು :24-ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿನ ಕೆರೆ ಮೊನ್ನೆ ಸುರಿದ ಬಾರಿಮಳೆಯಿಂದ ಕರೆ ಕೋಡಿ ತುಂಬಿ ಹರಿಯುತ್ತಿದೆ, ಸುಮಾರು 47 ವರ್ಷಗಳಿಂದ ಕರೆ ತುಂಬಿರಲಿಲ್ಲಾ, ಈ ವರ್ಷ ವಾಡಿಕೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಿಂದ ರೈತರು ಹರ್ಷಚಿತ್ತರಾಗಿ ಕೆರೆಗೆ
ಬಾಗೀನ ಆರ್ಪಿಸುವ ಕಾರ್ಯಕ್ರಮಕ್ಕೆ ತರಳಬಾಳು ಜಗದ್ಗುರು ಸಿರಿಗೆರೆಯ ಶ್ರೀ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಜೀಗಳವರಿಂದ ನೆರವೇರಿಸಿದರು.

ಈ ಸಂದರ್ಭದಲ್ಲಿ 57 ಕೆರೆ ತುಂಬಿಸುವ ಯೋಜನೆಯ ಹೋರಾಟಗಾರರು ಹಾಗೂ ಬಿಜೆಪಿ ಮುಖಂಡರಾದ ದಿವಂಗತ ಡಾ॥ ಮಂಜುನಾಥ ಗೌಡ್ರು ರವರಿಗೆ ವೇದಿಕೆಯಲ್ಲಿ 2 ಮಿಷಗಳ ಕಾಲ, ಮೌನಚರಣೆ ನಡೆಸಿದರು.

ಈ ಕಾರ್ಯಕ್ರಮದಲ್ಲಿ
ದಾವಣಗೆರೆ ಜಿಲ್ಲೆಯ ಜನಪ್ರಿಯ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಕ್ಷೇತ್ರದ ಜನಪ್ರತಿನಿಧಿಗಳು, ಕಾರ್ಯಕರ್ತರು, ಮಹಿಳೆಯರು, ಯುವಕರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿದ್ದರು.

Leave A Reply

Your email address will not be published.