ವಿಕಾಸ ಥಟ್ ಅಂತ ಹೇಳಿ- ಬೀದರಿನ ಗುರುಶ್ರೀ ಎಸ್. ಮಠಪತಿ ಪ್ರಥಮ

ವಿಜಯನಗರ(ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಶಾಖೆಯಿಂದ ಸುಪ್ರಿಯಾ, ಬೀದರ್ ಶಾಖೆಯಿಂದ ಗುರುಶ್ರೀ ಎಸ್.ಮಠಪತಿ, ಕೊಟ್ಟೂರು ಶಾಖೆಯಿಂದ ಸಂವತ್ಸರ್ ಶಾಸ್ತ್ರಿಮಠ ಹಾಗೂ ತೊರಣಗಲ್ಲು ಶಾಖೆಯಿಂದ ತುಷಾರ್ ಜೋಶಿ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಬೀದರಿನ ಗುರುಶ್ರೀ ಎಸ್.ಮಠಪತಿ 190 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಬಳ್ಳಾರಿಯ ಸುಪ್ರಿಯಾ 180 ಅಂಕಗಳನ್ನು, ಕೊಟ್ಟೂರಿನ ಸಂವತ್ಸರ್ ಶಾಸ್ತ್ರಿಮಠ 90 ಅಂಕಗಳನ್ನು ಹಾಗೂ ತೊರಣಗಲ್ಲಿನ ತುಷಾರ್ ಜೋಶಿ 70 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು. ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

Leave A Reply

Your email address will not be published.