ಬೆಳ್ತಂಗಡಿ: ಮುಸ್ಲಿಂಮರ ದರ್ಗಾಕ್ಕೆ ತೆರಳಿದರೇ ಹಿಂದೂ ಯುವತಿಯರು!??ಗರುಡನ ಪೇಜ್ ನಲ್ಲಿ ಹರಿದಾಡುತ್ತಿದೆ ಗುರುದೇವ ಕಾಲೇಜಿನ ಸುದ್ದಿ

ಮುಸ್ಲಿಂ ಹೆಂಗಸರಿಗೆ ಪ್ರವೇಶವಿಲ್ಲದ ದರ್ಗಾಕ್ಕೆ ಬೆಳ್ತಂಗಡಿಯ ಗುರುದೇವ ಕಾಲೇಜಿನ ಹಿಂದೂ ಹುಡುಗಿಯರನ್ನು ಕಳುಹಿಸಿದ್ದಾರೆ ಎಂಬ ಸುದ್ದಿ ತಾಲೂಕಿನೆಲ್ಲೆಡೆ ಹರಿದಾಡುತ್ತಿದ್ದು, ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಗರುಡ ಹಿಂದೂ ಫೇಸ್ ಬುಕ್ ಪೇಜ್ ಶೇರ್ ಮಾಡಿ ಅಪಪ್ರಚಾರ ಮಾಡುತ್ತಿದೆ ಎಂದು ಗುರುದತ್ತ ಕಾಲೇಜಿನ ಪ್ರಾಂಶುಪಾಲರು ಡಾ. ಸವಿತಾ ಅವರು ದೂರು ನೀಡಿದ್ದಾರೆ.

ಗರುಡ ಹಿಂದೂ ಫೇಸ್ ಬುಕ್ ಪೇಜ್ ನಿಂದ ಶೇರ್ ಆಗಿದ್ದ ಪೋಸ್ಟ್ ನಲ್ಲಿ, ‘ಮುಸ್ಲಿಂ ಹೆಂಗಸರಿಗೆ ಪ್ರವೇಶವಿಲ್ಲದ ಮುಸ್ಲಿಮರ ದರ್ಗಾಕ್ಕೆ ಬೆಳ್ತಂಗಡಿ ಮಾಜಿ ಕಾಂಗ್ರೆಸ್ ಶಾಸಕನ ಗುರುದೇವ ಕಾಲೇಜಿನ ಹಿಂದೂ ಹುಡುಗಿಯರನ್ನು ಮುಸ್ಲಿಮ್ ಜಿಹಾದಿಗಳ ದರ್ಗಾಕ್ಕೆ ಕಳಿಸಿದ್ದಾರೆ. ಈ ಕಾಂಗ್ರೆಸಿಗರ ಉದ್ದೇಶ ಏನು? ಹಿಂದೂಗಳೇ ಇಂತಹ ಜಿಹಾದಿಗಳನ್ನು ಪೋಷಿಸುವ ಕಾಲೇಜಿಗೆ ನಿಮ್ಮ ಹೆಣ್ಣು ಮಕ್ಕಳನ್ನು ಕಳಿಸುವ ಮುನ್ನ ನೂರು ಬಾರಿ ಯೋಚಿಸಿ’ ಎನ್ನುವ ವಿಚಾರದ ಕುರಿತು ಗರುಡ ಹಿಂದೂ ಫೇಸ್ ಬುಕ್ ಪೇಜ್ ಪೋಸ್ಟ್ ಶೇರ್ ಮಾಡಿದೆ. ಹಾಗಾಗಿ ಇದೀಗ ಅಡ್ಮಿನ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿಯ ಗುರುದೇವ ಕಾಲೇಜಿನ ನೇತೃತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನರ್ಪ ಕೋಡಿಯಾಲ್‌ಬೈಲು ನಲ್ಲಿ ಎನ್.ಎಸ್.ಎಸ್. ಶಿಬಿರ ನಡೆಯುತ್ತಿದ್ದು, ಶಿಬಿರಾರ್ಥಿಗಳು ಗ್ರಾಮದ ಸ್ಥಳೀಯ ಪ್ರಾರ್ಥನಾಲಯಗಳಿಗೆ ಭೇಟಿ ನೀಡಿರುತ್ತಾರೆ. ಆದರೆ ದರ್ಗಾವೊಂದಕ್ಕೆ ಭೇಟಿ ನೀಡಿ ಅದರ ಆವರಣದಲ್ಲಿ ಶಿಬಿರಾರ್ಥಿಗಳು ಹಾಗೂ ಶಿಬಿರಾಧಿಕಾರಿಗಳು ತೆಗೆದಿರುವ ಫೋಟೋವನ್ನು ಗರುಡ ಹಿಂದೂ ಸಂಘನೆಯು ದುರುಪಯೋಗ ಪಡಿಸಿಕೊಂಡು ಶ್ರೀ ಗುರುದೇವ ಕಾಲೇಜಿನ ಬಗ್ಗೆ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಅಪಪ್ರಚಾರ ಮಾಡಿರುತ್ತಾರೆ. ಸಂಸ್ಥೆಯ ಅಧ್ಯಕ್ಷರು ಹಾಗೂ ನಮ್ಮ ಕಾಲೇಜಿನ ತೇಜೋವಧೆಗೆ ಯತ್ನಿಸಿರುತ್ತಾರೆ.

ಈಗಾಗಲೇ ವಾಟ್ಸ್ ಆಪ್ ಮತ್ತು ಫೇಸ್ಬುಕ್ ಗಳಲ್ಲಿ ಸಂದೇಶವನ್ನು ಹರಿಯಬಿಡಲಾಗಿದ್ದು ತಾವುಗಳು ಗರುಡ ಹಿಂದೂ ಫೇಸ್‌ಬುಕ್ ಖಾತೆಯ ಮೂಲವನ್ನು ಪತ್ತೆಹಚ್ಚಿ ಖಾತೆ ನಿರ್ವಾಹಕನ (ಪೇಜ್ ಅಡ್ಮಿನ್) ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತಿದ್ದೇನೆ ಎಂದು ಕಾಲೇಜಿನ ಪ್ರಾಂಶುಪಾಲರು ಡಾ. ಸವಿತಾ ದೂರು ನೀಡಿದ್ದಾರೆ.

Leave A Reply

Your email address will not be published.