ಭಾರಿ ಗಾತ್ರದ ಅಲೆಗೆ ಮುಳುಗಿದ ಮೀನುಗಾರಿಕಾ ದೋಣಿ !! | ಬೋಟ್ ನಲ್ಲಿದ್ದ ಐವರು ಮೀನುಗಾರರ ರಕ್ಷಣೆ

ಆಳ ಸಮುದ್ರದ ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಶಿರೂರು ಗ್ರಾಮದ ಮುಸ್ತಾಕ್‌, ಶಬ್ಬೀರ್‌, ರೋಜಿ ಅಬ್ಬೂಬಕ್ಕರ್‌, ತರಿಸಲ್ಲಾ ಅಶ್ರಫ್‌, ಭೂಂಭಾ ಮೀರಾ ಪ್ರಾಣಾಪಾಯದಿಂದ ಪಾರಾದ ಮೀನುಗಾರರು. ಇವರೆಲ್ಲರೂ ಶಿರೂರಿನ ಮುಸ್ತಾಕ್‌ ಮಾಲೀಕತ್ವದ ಬೇಬಿ ಅಮಿನಾ ಹೆಸರಿನ ಆಳ ಸಮುದ್ರದ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ತೆರಳಿದ್ದರು.

ಈ ವೇಳೆ ಭಾರಿ ಗಾತ್ರದ ಅಲೆಗೆ ದೋಣಿ ಮುಳುಗಿದೆ. ತಕ್ಷಣ ಅಲ್ಲೇ ಮತ್ತೊಂದು ದೋಣಿಯಲ್ಲಿದ್ದ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರಾವಳಿ ಕಾವಲು ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಮೀನುಗಾರರ ರಕ್ಷಣೆಗೆ ಸಾಥ್ ನೀಡಿದೆ.

Leave A Reply

Your email address will not be published.