ನಾ ಸೋಮೇಶ್ವರ ನೇತೃತ್ವದ ‘ವಿಕಾಸ ಥಟ್ ಅಂತ ಹೇಳಿ ‘ ಕಾರ್ಯಕ್ರಮ – ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ ಪ್ರಥಮ, ಹೊಸಪೇಟೆಯ ಮಧುಶ್ರೀ ಎ ದ್ವಿತೀಯ

ವಿಜಯನಗರ (ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಹೊಸಪೇಟೆ ಶಾಖೆಯಿಂದ ಮಧುಶ್ರೀ.ಎ, ಸಿಂಧನೂರು ಶಾಖೆಯಿಂದ ಕವಿತಾ ಹಿರೇಮಠ, ಹುಬ್ಬಳ್ಳಿ ಶಾಖೆಯಿಂದ ಅಮಿತ್ ಮಹಾಜನ ಹಾಗೂ ಗಂಗಾವತಿ ಶಾಖೆಯಿಂದ ಶ್ರೀಧರ.ಎಸ್ ಸೊಪ್ಪಿಮಠ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. 8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ 150 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಹೊಸಪೇಟೆಯ ಮಧುಶ್ರೀ.ಎ 120 ಅಂಕಗಳನ್ನು, ಸಿಂಧನೂರಿನ ಕವಿತಾ ಹಿರೇಮಠ 110 ಅಂಕಗಳನ್ನು ಹಾಗೂ ಹುಬ್ಬಳ್ಳಿಯ ಅಮಿತ್ ಮಹಾಜನ 90 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

Leave A Reply

Your email address will not be published.