ಮಂಗಳೂರು : ಮಾನಭಂಗಕ್ಕೆ ಯತ್ನಿಸಿ ಪ್ರೀತಿಸಿದ ಹುಡುಗಿಯಿಂದ ದೂರವಾದ ಯುವಕ: 6 ತಿಂಗಳ ಬಳಿಕ ಕೊಲೆ ಯತ್ನ, ಯುವಕ ಅರೆಸ್ಟ್

ಮಂಗಳೂರು :ಪ್ರೀತಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯಿಂದ ದೂರವಾಗಿದ್ದ ಯುವಕ ಇದೀಗ ಆಕೆಯನ್ನು ಕೊಲೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಯುವತಿಯಿಂದ ದೂರವಾದ ವ್ಯಕ್ತಿ ಆರು ತಿಂಗಳ ಬಳಿಕ ಆಕೆಯ ಕೊಲೆಗೆ ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿಯ ಶಿವರಾಜ್ ಕುಲಾಲ್ (28) ಬಂಧಿತ ಆರೋಪಿಯಾಗಿದ್ದಾನೆ.

ಹಳೆಯಂಗಡಿಯ 30 ವರ್ಷದ ವಿವಾಹಿತ ಮಹಿಳೆಯೊಬ್ಬಳು ಗಂಡನಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದು ನ್ಯಾಯಾಲಯದಲ್ಲಿದೆ. ಇದರ ಮಧ್ಯೆ ಈ ಮಹಿಳೆಗೆ ಸಾಮಾಜಿಕ ಜಾಲತಾಣದ ಮುಖಾಂತರ ಬಂಟ್ವಾಳದ ಶಿವರಾಜ್ ಕುಲಾಲ್ ಪರಿಚಯವಾಗಿದೆ. ಇವರಿಬ್ಬರು ಪ್ರೀತಿಸಲು ತೊಡಗಿದ್ದರು. ಆರು ತಿಂಗಳ ಹಿಂದೆ ಶಿವರಾಜ್ ಈಕೆಯ ಮಾನಭಂಗಕ್ಕೆ ಪ್ರಯತ್ನಿಸಿದ್ದ. ಇದಾದ ಬಳಿಕ ಆಕೆ ಆತನಿಂದ ದೂರವಾಗಿದ್ದಳು.

ಮೇ.17 ರಂದು ಸಂಜೆ ಶಿವರಾಜ್ ಕುಲಾಲ್ ಯುವತಿ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಬಂದು, ಆಕೆ ಲಿಫ್ಟಿನಿಂದ ಕೆಳಗಡೆ ಹೋಗುವ ಸಮಯದಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದನು. ಈ ಬಗ್ಗೆ ಮಹಿಳೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.