ಪುತ್ತೂರು : ಅನಾರೋಗ್ಯದಿಂದ ಸಾವಿಗೀಡಾದ ಪುಟ್ಟ ಮಗು!

ಪುತ್ತೂರು: ಮೆ.6 ರಂದು ಕರಿಯಾಲು ನೆಕ್ಕರೆ ಎಂಬಲ್ಲಿ ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.

ಸಂತೋಷ್ ಮತ್ತು ತನುಜಾ ದಂಪತಿಗಳ ಮೂರುವರೆ ವರ್ಷದ ಗಂಡು ಮಗು ಇಶಾಂತ್ ಎಂಬ ಪುಟ್ಟ ಮಗು ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದು.

ಮಗು ಎರಡು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಲಾಗಿತ್ತು. ಮಗು ಚೇತರಿಕೆ ಕೂಡಾ ಕಂಡಿತ್ತು. ಆದರೇ ಮೇ.6 ರಂದು ಹಠಾತ್ ಮಗುವಿನ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದೆ ಎನ್ನಲಾಗಿದೆ.

Leave A Reply

Your email address will not be published.